15, ಮಾರ್ಚ್ 2025
ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕದಡುವ ಬೀಡುಗಳ ಅಥವಾ ಶ್ರೇಷ್ಟತೆಯ ವ್ಯಸನಿಗಳ ಮನೋ ವಿಕಾರ ಅನಾವರಣಗೊಳಿಸುವ ಸಾಧನಗಳ ಅನ್ನುವುದನ್ನ ವಿಮರ್ಶಿಸಲೆ ಬೇಕಾದ ಸಂಧರ್ಭಗಳು ಆಗಾಗ್ಗೆ ಬಂದೊದಗುತ್ತಲೇ ಇರುತ್ತವೆ. ಇಂತಹ ಸಂದರ್ಭವೊಂದು ಕ್ಲಬ್ ಹೌಸ್ ಅನ್ನ್ಜುವ ಮಾತಾಡುವ ಜಾಲತಾಣದಲ್ಲಿ ಬಂದಿದ್ದು, ಸಂಪ್ರದಾಯವಾದಿಗಳು ತಮ್ಮ ಸಂಪ್ರದಾಯವೇ ಶ್ರೇಷ್ಠ ಉಳಿದದ್ದು ಕನಿಷ್ಠ ಅನ್ನುವ ಭಾವನೆಯನ್ನ ಬಹಿರಂಗವಾಗಿ ವ್ಯಕ್ತ ಪಡಿಸಿದ್ದನ್ನ ಇಂದು ಅವಲೋಕಿಸೋಣ. ತಮ್ಮ ಸಂಪ್ರದಾಯ ಶ್ರೇಷ್ಠ ಎನ್ನುವುದು ಸರಿಯೇ, ಆದರೆ ಅದನ್ನ ಸಾಬೀತುಮಾಡಲು ಬೇರೊಂದು ಸಂಪ್ರದಾಯವನ್ನು ಉದ್ದೇಶ ಪೂರಿತವಾಗಿ ಅವಹೇಳನ ಮಾಡುವುದು ಅಕ್ಷಮ್ಯವಷ್ಟೆ ಅಲ್ಲದೆ ಕಾನೂನಿನ ರೀತ್ಯ ಶಿಕ್ಷಾರ್ಹ ಅಪರಾಧವಾಗಿದೆ.
"ಕಲ್ಯಾಣದ ಮಂತ್ರಿ ಬಸವಣ್ಣ ಮತ್ತು ಬಾಲ ಸನ್ಯಾಸಿ ಶಂಕರಾಚಾರ್ಯರು" ಎಂಬ ಶೀರ್ಷಿಕೆಯಡಿ ಒಂದು ಚರ್ಚಾ ಕಾರ್ಯಕ್ರಮ ಆಯೋಜಿಸಿ ಅದರಲ್ಲಿ ಬಸವಣ್ಣನವರಿಗೆ ಉದ್ದೇಶಪೂರಿತವಾಗಿ ಅವಹೇಳನ ಮಾಡುವ ಹುನ್ನಾರ ನಡೆಸಿದ್ದು ಈ ಕೆಳಗಿನಂತಿದೆ.
1. ತಾವು ದ್ವೇಷಿಸುವ ಬಸವಣ್ಣನವರಿಗೆ ಬಸವಣ್ಣ ಎಂದು ಏಕವಚನ ಸಂಭೋಧನೆ ಮಾಡಿದ್ದರೆ ತಮ್ಮ ಪ್ರೀತಿಪಾತ್ರರಿಗೆ ಶಂಕರಾಚಾರ್ಯರರು ಎಂದು ಗೌರವಯುತವಾದ ಸಂಭೋದನೆ.
2. ಬಸವಣ್ಣನವರು ಯಾವುದೇ ತತ್ವ ಜ್ಞಾನಿಯಲ್ಲ ಬದಲಿಗೆ ಅವರು ಒಂದು ಸಮೃದ್ದ ರಾಜ್ಯದ ಮಂತ್ರಿಯಾಗಿದ್ದರು, ಆದರೆ ಶಂಕರಾಚಾರ್ಯರು ಬಾಲ ಸನ್ಯಾಸಿ ಆಗಿದ್ದು ಅದ್ವೈತ ಸಿದ್ದಾಂತದ ಪ್ರತಿಪಾದಕರಾಗಿದ್ದರು ಎಂದು ಪ್ರತಿಪಾದಿಸಲಾಗಿತ್ತು.
3. ಬಸವಣ್ಣನವರು ಸಂಸಾರಿ ಆಗಿದ್ದು ಸಕಲ ಭೋಗಗಳನ್ನ ಅನುಭವಿಸಿದವರು, ಆದರೆ ಶಂಕರಾಚಾರ್ಯರು ಬಾಲ ಸನ್ಯಾಸಿಯಾಗಿ ಅವರ ಜೀವಿತದ ಕೇವಲ 32 ವರ್ಷಗಳಲ್ಲಿ ಇಡೀ ಭಾರತ ಸುತ್ತಿ ಧರ್ಮವನ್ನು ಮರು ಸ್ಥಾಪಿಸಿದವರು. ಇವರು ಪ್ರತಿಪಾದಿಸುತ್ತಿರುವುದು ಯಾವ ಧರ್ಮ ಎಂದು ಇವರಿಗೆ ಸ್ಪಷ್ಟತೆ ಇದ್ದಂತಿದೆ, ಅದು ಖಂಡಿತ ಹಿಂದೂ ಧರ್ಮವಾಗಿರಲು ಸಾಧ್ಯವಿಲ್ಲ. ಇದನ್ನ ಈ ಕಾರ್ಯಕ್ರಮ ರೂಪಿಸಿದ ಅರಸೀಕೆರೆ ತಾಲೂಕು ಮೂಲದ ಅಶ್ವಿನಿ ಎಂಬ ಯುವತಿ ಎಲ್ಲ ವೇಧಿಕೆಗಳಲ್ಲಿ ಹೇಳುತ್ತಲೇ ಬಂದಿದ್ದಾಳೆ.
4. ಇನ್ನೊಂದು ಗಹನವಾದ ವಿಚಾರ ಚರ್ಚಿಸಿದ್ದು ಅಂದರೆ, ಇಬ್ಬರು ಗುರುಗಳಲ್ಲಿ ಒಬ್ಬರು ಸಮಾನತೆ ಮೆರೆದರೆ ಇನ್ನೊಬ್ಬರು ಅಸಮಾನತೆ ಸಾರಿದವರೆಂದು. ಈ ವಿಷಯವನ್ನ ಪ್ರಸ್ತುತ ಪಡಿಸಲು ಬಸವಣ್ಣನವರ ಹಲವು ವಚನಗಳನ್ನ ಉಲ್ಲೇಖಿಸಿ ಇವರು ಹರಿ ಮತ್ತು ಹರರಲ್ಲಿ ಬೇದ ಮಾಡಿದ್ದಾರೆ, ದೇವರಲ್ಲಿ ಅಸಮಾನತೆ ಮತ್ತು ವೈರತ್ವ ಸಾರಿದ್ದಾರೆಂದು, ಮತ್ತು ಶಂಕರಾಚಾರ್ಯರು ಹರಿ ಮತ್ತು ಹರರಲ್ಲಿ ಬೇದ ಬಾವ ಅಳಿಸಿ ಹಾಕಿ ಎಲ್ಲರಿಗೂ ಎಲ್ಲ ದೇವರನ್ನು ಸಮಾನವಾಗಿ ಪೂಜಿಸುವ ಅವಕಾಶ ಮಾಡಿಕೊಟ್ಟಿದ್ದಾರೆಂದು ಪ್ರತಿಪಾದಿಸಲಾಯಿತು.
ಇಲ್ಲಿ, ಬಸವಣ್ಣನವರು ಶಿವ ಪಂತಕ್ಕೆ ಬಂದವರು ತಮ್ಮ ಹಳೆಯ ಸಂಪ್ರದಾಯದ ಪೂಜೆ ಹೋಮ ಹವನಗಳಲ್ಲಿ ತಮ್ಮ ಸಮಯ ವ್ಯರ್ಥ ಮಾಡದೆ ಕಾಯಕದಲ್ಲಿ ತೊಡಗಲೆಂದು ಮತ್ತು ಏಕದೇವೋಪಸನೆ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎನ್ನುವ ಕಾರಣಕ್ಕೆ ಹೇಳಿದ್ದಾರೆ. ಇದು ಶಿವಯೋಗ ಧ್ಯಾನ (ಶಿವ ಪೂಜೆ ಮಾಡುವ ವಿಧಾನವೇ ಒಂದು ಧ್ಯಾನ) ದಿಂದ ಸಾಬೀತಾಗಿದೆ. ಈ ಅವಕಾಶವನ್ನ ಬಸವಣ್ಣನವರು ಶೂದ್ರರೆಂದು ಕಡೆಗಾಣಿಸಿದವರಿಗೂ ಮತ್ತು ಮಹಿಳೆಯರಿಗೂ ಮಾಡಿಕೊಟ್ಟು ಮಹಾನ್ ಮಾನವತವಾದ ಪ್ರತಿಪಾದಿಸಿದ್ದಲ್ಲದೆ, ಆಚರಣೆಗೂ ತಂದರು. ಆದರೆ ಶಂಕರಾಚಾರ್ಯರು, ಬ್ರಹ್ಮಸೂತ್ರದಲ್ಲಿರುವ ಶೂದ್ರ ಮತ್ತು ಮಹಿಳೆಯರಿಗೆ ವೇದಾಧ್ಯಯನದ ಹಕ್ಕಿಲ್ಲ ಎಂಬ ಈ ಘೋರ ಅಸಮಾನತೆಯನ್ನ ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ವಿರೋದ ವ್ಯಕ್ತಪಡಿಸುವ ಎಡಪಂತಿಯರು ಪ್ರತಿಪಾದಿಸಿದ್ದಾರೆ.
ಹಾಗಾದರೆ, ದೇವರಲ್ಲಿ ಸಮಾನತೆ ತಂದು ಜನರಲ್ಲಿ ಅಸಮಾನತೆ ಉಳಿಸಿಕೊಂಡ ಶಂಕರಾಚಾರ್ಯರು ಮೇಲೊ ಅಥವಾ ಅಸ್ಪೃಶರು, ಹಿಂದುಳಿದವರಿಗೆ ಸಮಾನ ಬಾಳ್ವೆಗೆ ಅವಕಾಶ ಮಾಡಿ ಕೊಟ್ಟ ಬಸವಣ್ಣನವರು ಮೇಲೊ ಅನ್ನೋ ಪ್ರಶ್ನೆ ಎತ್ತಿ ಶಂಕರಾಚಾರ್ಯರನ್ನ ನಿಂದಿಸುವ ಕೆಲಸವೂ ಇದೆ ಕ್ಲಬ್ ಹೌಸ್ ನಲ್ಲಿ ಮತ್ತೊಂದು ಕಾರ್ಯಕ್ರಮದಲ್ಲಿ ಎಡ ಚಿಂತನೆಯ ಜನರು ಮಾಡಿದ್ದಾರೆ.
ಅಷ್ಟೇ ಅಲ್ಲದೆ ಶಂಕರಾಚಾರ್ಯರು ಹೆಣ್ಣು ಮಕ್ಕಳು ನಿತ್ಯ ನಾರಕಿಯೆಂದು ಹೇಳಿದರೆ ಬಸವಣ್ಣ ತನ್ನ ಸ್ವಂತ ಅಕ್ಕಳಿಗೆ ಯಾಕೆ ಉಪನಯನದ ಹಕ್ಕಿಲ್ಲ ಎಂದು ಪ್ರಶ್ನಿಸಿದವರು ಮತ್ತು ಮುಂದೆಯೂ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟು, ಇಡೀ ಪ್ರಪಂಚಕ್ಕೆ ಸಂಸತ್ತಿನ, ಪ್ರಜಾತಾಂತ್ರಿಕತೆಯ, ಸಮಾನತೆಯ ಮುನ್ನುಡಿ ಬರೆದವರು ವಿಶ್ವಗುರು ಬಸವಣ್ಣ.
5. ಬಸವಣ್ಣನವರು ಕಲ್ಯಾಣದ ಸಕಲ ವೈಭೋಗದ ಮಂತ್ರಿ ಎಂದವರು ತಮ್ಮ ಮನೋ ವಿಕೃತವನ್ನ ಮುಂದುವರೆಸುತ್ತಾ ಬಸವಣ್ಣನವರದ್ದೇ ಕೆಳಗಿನ ಒಂದು ವಚನ ಓದಿ, ಅವರ ಹುಟ್ಟನ್ನೇ ಪ್ರಶ್ನಿಸುತ್ತಾರೆ.
ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು- ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು; ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ.ಇಷ್ಟೆಲ್ಲ ಆದ ಮೇಲೂ ಮತ್ತೆ ಮತ್ತೆ ಇದೆ ಸಂಪ್ರದಾಯವಾದಿ ಮನಸ್ಥಿತಿಯ ಯುವತಿ ಶಂಕರಾಚಾರ್ಯರು ಮತ್ತು ಬಸವಣ್ಣನವರ ಹೋಲಿಕೆ ಮಾಡಿ ಬಸವಣ್ಣನವರನ್ನ ಅವಹೇಳನ ಮಾಡಲು ಹೋಗಿ ಬಸವಣ್ಣ ಮತ್ತು ಶಂಕರಾಚಾರ್ಯರು ಇಬ್ಬರನ್ನೂ ಅವಹೇಳನ ಮಾಡಿಸಿದ ಅಪಕೀರ್ತಿ ಹಾಸನ ಜಿಲ್ಲೆಯವಳು ಎಂದು ಹೇಳಿ ಕೊಳ್ಳುವ ಅಶ್ವಿನಿ ಎಂಬ ಯುವತಿಗೆ ಸೇರುತ್ತದೆ.
ಸಂಪ್ರದಾಯವಾದಿಗಳು ಕ್ಲಬ್ ಹೌಸ್ ನಲ್ಲಿ ಬಸವಣ್ಣನವರನ್ನ ಅವಹೇಳನ ಮಾಡಿದ್ದು ಇದು ಮೊದಲೂ ಅಲ್ಲ, ಬಹುಶಃ ಕೊನೆಯೂ ಅಲ್ಲ. ಹಿಂದೊಮ್ಮೆ ಶಿವಮೊಗ್ಗದ ದಿಲೀಪ್ ನಾಡಿಗ್ ಎಂಬ ವ್ಯಕ್ತಿ ತನ್ನ ಸಂಪ್ರದಾಯ ವಿವರಿಸುವಾಗ ಪ್ರಶ್ನೆ ಒಂದಕ್ಕೆ ಉತ್ತರಿಸುವಾಗ ಜನಿವಾರ ತೆಗೆದ ಬಸವಣ್ಣ ಕೂಡ ಚಾಂಡಾಲ ಅಂತ ಹೇಳಲು ಯಾವುದೇ ಮುಜುಗರ ಪಡಲಿಲ್ಲ, ಇಂದಿಗೂ ಆ ಮಾತಿಗೆ ಪಶ್ಚಾತ್ತಾಪ ಪಟ್ಟಿಲ್ಲ. ಬದಲಿಗೆ ಬಸವಣ್ಣನವರನ್ನು ಪದೇ ಪದೇ ಅವಹೇಳನ ಮಾಡಿದ ಅಶ್ವಿನೀ ಎಂಬ ಯುವತಿಯ ಬೆಂಬಲಕ್ಕೆ ನಿಂತಿದ್ದು ಈ ಸಂಪ್ರದಾಯವಾದಿಗಳ ಮನಸ್ಥಿತಿಗೆ ಹಿಡಿದ ಕನ್ನಡಿಯಂತಾಗಿದೆ.
ಈ ರೀತಿ ಮುಂದುವರೆದ ಬಸವಣ್ಣನವರ ಉದ್ದೇಶಪೂರಿತ ಅವಹೇಳನಕ್ಕೆ ಕಡಿವಾಣ ಹಾಕಬೇಕು ಎಂದರೆ ಕರ್ನಾಟಕದಾದ್ಯಂತ ಇಂತವರ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 302 ರ ಅಡಿ ಪ್ರಕರಣ ದಾಖಲಿಸಿ ಸರಿಯಾದ ಶಾಸ್ತಿ ಮಾಡಲೇ ಬೇಕಿದೆ. ಈ ಲೇಖನ ಆಧರಿಸಿ ದೂರು ದಾಖಲಿಸಲು ಇಚ್ಚಿಸುವವರು ನನ್ನನ್ನು ಸಂಪರ್ಕಿಸಿದರೆ, ನಾನು ಎಲ್ಲಾ ದೂರುಗಳಿಗೂ ಸಾಕ್ಷಿಯಾಗಿ ನಿಲ್ಲಲು ಸಿದ್ದನಿದ್ದೇನೆ.
- ಕಿರಣ್. ಬಿ.



