Saturday, March 15, 2025

ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕೆಡಿಸುವ ಬೀಡುಗಳು...

15, ಮಾರ್ಚ್ 2025

ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕದಡುವ ಬೀಡುಗಳ ಅಥವಾ ಶ್ರೇಷ್ಟತೆಯ ವ್ಯಸನಿಗಳ ಮನೋ ವಿಕಾರ ಅನಾವರಣಗೊಳಿಸುವ ಸಾಧನಗಳ ಅನ್ನುವುದನ್ನ ವಿಮರ್ಶಿಸಲೆ ಬೇಕಾದ ಸಂಧರ್ಭಗಳು ಆಗಾಗ್ಗೆ ಬಂದೊದಗುತ್ತಲೇ ಇರುತ್ತವೆ. ಇಂತಹ ಸಂದರ್ಭವೊಂದು ಕ್ಲಬ್ ಹೌಸ್ ಅನ್ನ್ಜುವ ಮಾತಾಡುವ ಜಾಲತಾಣದಲ್ಲಿ ಬಂದಿದ್ದು, ಸಂಪ್ರದಾಯವಾದಿಗಳು ತಮ್ಮ ಸಂಪ್ರದಾಯವೇ ಶ್ರೇಷ್ಠ ಉಳಿದದ್ದು ಕನಿಷ್ಠ ಅನ್ನುವ ಭಾವನೆಯನ್ನ ಬಹಿರಂಗವಾಗಿ ವ್ಯಕ್ತ ಪಡಿಸಿದ್ದನ್ನ ಇಂದು ಅವಲೋಕಿಸೋಣ. ತಮ್ಮ ಸಂಪ್ರದಾಯ ಶ್ರೇಷ್ಠ ಎನ್ನುವುದು ಸರಿಯೇ, ಆದರೆ ಅದನ್ನ ಸಾಬೀತುಮಾಡಲು ಬೇರೊಂದು ಸಂಪ್ರದಾಯವನ್ನು ಉದ್ದೇಶ ಪೂರಿತವಾಗಿ ಅವಹೇಳನ ಮಾಡುವುದು ಅಕ್ಷಮ್ಯವಷ್ಟೆ ಅಲ್ಲದೆ ಕಾನೂನಿನ ರೀತ್ಯ ಶಿಕ್ಷಾರ್ಹ ಅಪರಾಧವಾಗಿದೆ.

"ಕಲ್ಯಾಣದ ಮಂತ್ರಿ ಬಸವಣ್ಣ ಮತ್ತು ಬಾಲ ಸನ್ಯಾಸಿ ಶಂಕರಾಚಾರ್ಯರು" ಎಂಬ ಶೀರ್ಷಿಕೆಯಡಿ ಒಂದು ಚರ್ಚಾ ಕಾರ್ಯಕ್ರಮ ಆಯೋಜಿಸಿ ಅದರಲ್ಲಿ ಬಸವಣ್ಣನವರಿಗೆ ಉದ್ದೇಶಪೂರಿತವಾಗಿ ಅವಹೇಳನ ಮಾಡುವ ಹುನ್ನಾರ ನಡೆಸಿದ್ದು ಈ ಕೆಳಗಿನಂತಿದೆ.

1. ತಾವು ದ್ವೇಷಿಸುವ ಬಸವಣ್ಣನವರಿಗೆ ಬಸವಣ್ಣ  ಎಂದು ಏಕವಚನ ಸಂಭೋಧನೆ ಮಾಡಿದ್ದರೆ ತಮ್ಮ ಪ್ರೀತಿಪಾತ್ರರಿಗೆ  ಶಂಕರಾಚಾರ್ಯರರು ಎಂದು ಗೌರವಯುತವಾದ ಸಂಭೋದನೆ.


2. ಬಸವಣ್ಣನವರು ಯಾವುದೇ ತತ್ವ ಜ್ಞಾನಿಯಲ್ಲ ಬದಲಿಗೆ ಅವರು ಒಂದು ಸಮೃದ್ದ ರಾಜ್ಯದ ಮಂತ್ರಿಯಾಗಿದ್ದರು, ಆದರೆ ಶಂಕರಾಚಾರ್ಯರು ಬಾಲ ಸನ್ಯಾಸಿ ಆಗಿದ್ದು ಅದ್ವೈತ ಸಿದ್ದಾಂತದ ಪ್ರತಿಪಾದಕರಾಗಿದ್ದರು ಎಂದು ಪ್ರತಿಪಾದಿಸಲಾಗಿತ್ತು.

3. ಬಸವಣ್ಣನವರು ಸಂಸಾರಿ ಆಗಿದ್ದು ಸಕಲ ಭೋಗಗಳನ್ನ ಅನುಭವಿಸಿದವರು, ಆದರೆ ಶಂಕರಾಚಾರ್ಯರು ಬಾಲ ಸನ್ಯಾಸಿಯಾಗಿ ಅವರ ಜೀವಿತದ ಕೇವಲ 32  ವರ್ಷಗಳಲ್ಲಿ ಇಡೀ ಭಾರತ ಸುತ್ತಿ ಧರ್ಮವನ್ನು ಮರು ಸ್ಥಾಪಿಸಿದವರು. ಇವರು ಪ್ರತಿಪಾದಿಸುತ್ತಿರುವುದು ಯಾವ ಧರ್ಮ ಎಂದು ಇವರಿಗೆ ಸ್ಪಷ್ಟತೆ ಇದ್ದಂತಿದೆ, ಅದು ಖಂಡಿತ ಹಿಂದೂ ಧರ್ಮವಾಗಿರಲು ಸಾಧ್ಯವಿಲ್ಲ. ಇದನ್ನ ಈ ಕಾರ್ಯಕ್ರಮ ರೂಪಿಸಿದ ಅರಸೀಕೆರೆ ತಾಲೂಕು ಮೂಲದ ಅಶ್ವಿನಿ ಎಂಬ ಯುವತಿ ಎಲ್ಲ ವೇಧಿಕೆಗಳಲ್ಲಿ ಹೇಳುತ್ತಲೇ ಬಂದಿದ್ದಾಳೆ.

4. ಇನ್ನೊಂದು ಗಹನವಾದ ವಿಚಾರ ಚರ್ಚಿಸಿದ್ದು ಅಂದರೆ, ಇಬ್ಬರು ಗುರುಗಳಲ್ಲಿ ಒಬ್ಬರು ಸಮಾನತೆ ಮೆರೆದರೆ ಇನ್ನೊಬ್ಬರು ಅಸಮಾನತೆ ಸಾರಿದವರೆಂದು. ಈ ವಿಷಯವನ್ನ ಪ್ರಸ್ತುತ ಪಡಿಸಲು ಬಸವಣ್ಣನವರ ಹಲವು ವಚನಗಳನ್ನ ಉಲ್ಲೇಖಿಸಿ ಇವರು ಹರಿ ಮತ್ತು ಹರರಲ್ಲಿ ಬೇದ ಮಾಡಿದ್ದಾರೆ, ದೇವರಲ್ಲಿ ಅಸಮಾನತೆ ಮತ್ತು ವೈರತ್ವ ಸಾರಿದ್ದಾರೆಂದು, ಮತ್ತು ಶಂಕರಾಚಾರ್ಯರು ಹರಿ ಮತ್ತು ಹರರಲ್ಲಿ ಬೇದ ಬಾವ ಅಳಿಸಿ ಹಾಕಿ ಎಲ್ಲರಿಗೂ ಎಲ್ಲ ದೇವರನ್ನು ಸಮಾನವಾಗಿ ಪೂಜಿಸುವ ಅವಕಾಶ ಮಾಡಿಕೊಟ್ಟಿದ್ದಾರೆಂದು ಪ್ರತಿಪಾದಿಸಲಾಯಿತು.

ಇಲ್ಲಿ, ಬಸವಣ್ಣನವರು ಶಿವ ಪಂತಕ್ಕೆ ಬಂದವರು ತಮ್ಮ ಹಳೆಯ ಸಂಪ್ರದಾಯದ ಪೂಜೆ ಹೋಮ ಹವನಗಳಲ್ಲಿ ತಮ್ಮ ಸಮಯ ವ್ಯರ್ಥ ಮಾಡದೆ ಕಾಯಕದಲ್ಲಿ ತೊಡಗಲೆಂದು ಮತ್ತು ಏಕದೇವೋಪಸನೆ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎನ್ನುವ ಕಾರಣಕ್ಕೆ ಹೇಳಿದ್ದಾರೆ. ಇದು ಶಿವಯೋಗ ಧ್ಯಾನ  (ಶಿವ ಪೂಜೆ ಮಾಡುವ ವಿಧಾನವೇ ಒಂದು ಧ್ಯಾನ) ದಿಂದ ಸಾಬೀತಾಗಿದೆ. ಈ ಅವಕಾಶವನ್ನ ಬಸವಣ್ಣನವರು ಶೂದ್ರರೆಂದು ಕಡೆಗಾಣಿಸಿದವರಿಗೂ ಮತ್ತು ಮಹಿಳೆಯರಿಗೂ ಮಾಡಿಕೊಟ್ಟು ಮಹಾನ್ ಮಾನವತವಾದ ಪ್ರತಿಪಾದಿಸಿದ್ದಲ್ಲದೆ, ಆಚರಣೆಗೂ ತಂದರು. ಆದರೆ ಶಂಕರಾಚಾರ್ಯರು, ಬ್ರಹ್ಮಸೂತ್ರದಲ್ಲಿರುವ ಶೂದ್ರ ಮತ್ತು ಮಹಿಳೆಯರಿಗೆ ವೇದಾಧ್ಯಯನದ ಹಕ್ಕಿಲ್ಲ ಎಂಬ ಈ ಘೋರ ಅಸಮಾನತೆಯನ್ನ ತಮ್ಮ ಬ್ರಹ್ಮಸೂತ್ರ ಭಾಷ್ಯದಲ್ಲಿ ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ವಿರೋದ ವ್ಯಕ್ತಪಡಿಸುವ ಎಡಪಂತಿಯರು ಪ್ರತಿಪಾದಿಸಿದ್ದಾರೆ. 

ಹಾಗಾದರೆ, ದೇವರಲ್ಲಿ ಸಮಾನತೆ ತಂದು ಜನರಲ್ಲಿ ಅಸಮಾನತೆ ಉಳಿಸಿಕೊಂಡ ಶಂಕರಾಚಾರ್ಯರು ಮೇಲೊ ಅಥವಾ ಅಸ್ಪೃಶರು, ಹಿಂದುಳಿದವರಿಗೆ ಸಮಾನ ಬಾಳ್ವೆಗೆ ಅವಕಾಶ ಮಾಡಿ ಕೊಟ್ಟ ಬಸವಣ್ಣನವರು ಮೇಲೊ ಅನ್ನೋ ಪ್ರಶ್ನೆ ಎತ್ತಿ ಶಂಕರಾಚಾರ್ಯರನ್ನ ನಿಂದಿಸುವ ಕೆಲಸವೂ ಇದೆ ಕ್ಲಬ್ ಹೌಸ್ ನಲ್ಲಿ ಮತ್ತೊಂದು ಕಾರ್ಯಕ್ರಮದಲ್ಲಿ ಎಡ ಚಿಂತನೆಯ ಜನರು ಮಾಡಿದ್ದಾರೆ.


ಅಷ್ಟೇ ಅಲ್ಲದೆ ಶಂಕರಾಚಾರ್ಯರು ಹೆಣ್ಣು ಮಕ್ಕಳು ನಿತ್ಯ ನಾರಕಿಯೆಂದು ಹೇಳಿದರೆ ಬಸವಣ್ಣ ತನ್ನ ಸ್ವಂತ ಅಕ್ಕಳಿಗೆ ಯಾಕೆ ಉಪನಯನದ ಹಕ್ಕಿಲ್ಲ ಎಂದು  ಪ್ರಶ್ನಿಸಿದವರು ಮತ್ತು ಮುಂದೆಯೂ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕೊಟ್ಟು, ಇಡೀ ಪ್ರಪಂಚಕ್ಕೆ ಸಂಸತ್ತಿನ, ಪ್ರಜಾತಾಂತ್ರಿಕತೆಯ, ಸಮಾನತೆಯ ಮುನ್ನುಡಿ ಬರೆದವರು ವಿಶ್ವಗುರು ಬಸವಣ್ಣ.

5. ಬಸವಣ್ಣನವರು ಕಲ್ಯಾಣದ ಸಕಲ ವೈಭೋಗದ ಮಂತ್ರಿ ಎಂದವರು ತಮ್ಮ ಮನೋ ವಿಕೃತವನ್ನ ಮುಂದುವರೆಸುತ್ತಾ ಬಸವಣ್ಣನವರದ್ದೇ ಕೆಳಗಿನ ಒಂದು ವಚನ ಓದಿ, ಅವರ ಹುಟ್ಟನ್ನೇ ಪ್ರಶ್ನಿಸುತ್ತಾರೆ. 

ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು- ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು; ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ.

ಈ ವಚನವನ್ನಓದುವ ಯಾವುದೇ ಸಂದರ್ಭಇಲ್ಲದಿದ್ದರೂ ಬೇಕಂತಲೆ ಓದಿ ಬಸವಣ್ಣನವರ ಹುಟ್ಟನ್ನ ಪ್ರಶ್ನಿಸಿ ಈ ವಚನ ಪ್ರಕ್ಷಿಪ್ತ (ಸೇರಿಸಿದ್ದು) ಇರಬಹುದು ನನಗೆ ಗೊತ್ತಿಲ್ಲ ಅಂತ ನಾಟಕವನ್ನೂ ಆಡಿ ತಮ್ಮ ಮನೋ ವಿಕೃತಿ ಮೆರೆದಿದ್ದಾರೆ. ಆದರೆ ಈ ವಚನ ಪ್ರಕ್ಷಿಪ್ತವಲ್ಲ. ಬದಲಿಗೆ ಇದು ಬಸವಣ್ಣನವರೇ ಬರೆದ ವಚನ ಆಗಿದ್ದು ವಚನ ಸಾಹಿತ್ಯ ಮತ್ತು ಕಲ್ಯಾಣದ ಇತಿಹಾಸ ಅರಿತವರು ಅದರ ಸಂದರ್ಭವನ್ನ ಅರಿಯಬಲ್ಲರು. ಆದರೆ ಅವಹೇಳನ ಮಾಡಲೇ ಬೇಕು ಅಂತ ನಿರ್ದರಿಸಿ out of context ಇದನ್ನ ಉಲ್ಲೇಖಿಸಿ ಕೇಳುಗರ ಮನಸಿನಲ್ಲಿ ಗೊಂದಲ ಉಂಟು ಮಾಡುವುದಲ್ಲದೆ ಬಸವಣ್ಣನವರ ಬಗ್ಗೆ ಅಸಹ್ಯ ಹುಟ್ಟಿಸುವುದೇ  ಮೂಲ ಉದ್ದೇಶವಾಗಿತ್ತು.

ಬಸವಣ್ಣನವರ ವಚನಗಳನ್ನ ಸಮಗ್ರವಾಗಿ ಅಧ್ಯಾಯನ ಮಾಡಿದ್ದರೆ ಇದನ್ನ ಯಾವ ಸಂದರ್ಭದಲ್ಲಿ ಬರೆದಿದ್ದರು ಅನ್ನುವ ಅರಿವು ಸುಲಭವಾಗಿಯೇ ಆಗುತ್ತಿತ್ತು. ಆದರೆ ಈ ವಚನವನ್ನ ಚೆರ್ರಿ ಪಿಕ್ ಮಾಡಿದ್ದರ ಉದ್ದೇಶ ಅದನ್ನ ಅರ್ಥ ಮಾಡಿಕೊಳ್ಳುವ ಬದಲಿಗೆ ಕೇವಲ ಶಂಕರಾಚಾರ್ಯರ ಜೊತೆ ಹೋಲಿಸಿ ಬಸವಣ್ಣನವರನ್ನ ಅವಹೇಳನ ಮಾಡುವುದಾಗಿತ್ತು.

ಈ ವಚನವನ್ನ ಬಸವಣ್ಣನವರು ಯಾವ ಸಂದರ್ಭಕ್ಕೆ ಯಾಕೆ ಬರೆದಿದ್ದರು ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೊಟ್ಟಿರುವ ವ್ಯಾಖ್ಯಾಯನ ಈ ಕೆಳಗಿನಂತೆ ಸುಸ್ಪಷ್ಟವಾಗಿದೆ.

ಹುಟ್ಟಿನಿಂದ ಕೀಳು ಎಂಬುದಿಲ್ಲ: ಸಮಾಜದ ನೆಮ್ಮದಿಗೆ ಭಂಗವುಂಟುಮಾಡುವುದೆಂಬ ಕಾರಣದಿಂದಲೇ ಬಸವಣ್ಣನವರು ಉತ್ತಮ ಕುಲವೆನಿಸಿದ್ದ ತಮ್ಮ ಬ್ರಾಹ್ಮಣ ಜಾತಿಯನ್ನು ಸಂಪೂರ್ಣವಾಗಿ ತ್ಯಜಿಸಿ ಬಂದಿದ್ದರೂ ಕೆಲವರು ಮಾತ್ರ ಅವರು ಉಚ್ಚ ಕುಲದಲ್ಲಿ ಹುಟ್ಟಿದವರೆಂಬ ಭಾವನೆಯನ್ನು ಇರಿಸಿಕೊಂಡೇ ಅವರನ್ನು ಗೌರವದಿಂದ ಕಾಣುತ್ತಿದ್ದರೆಂದು ಈ ಹಿಂದೆ ನೋಡಿದೆವು. ಜಾತಿರಹಿತ ಸಮಾಜದ ನಿರ್ಮಾಣದಲ್ಲಿ ನಿರತರಾಗಿದ್ದ ಬಸವಣ್ಣನವರಿಗೆ ಹೀಗೆ ಜಾತಿಯ ಕಾರಣದಿಂದಲೇ ದೊರೆಯುವ ಗೌರವ ಆದರಗಳು ಅವರ ಭಾವನೆಯನ್ನೇ ಕೆಣಕಿ ಭಾವೋದ್ರೇಕಕ್ಕೆ ಎಡೆಮಾಡುತ್ತವೆ. ಅಂತಹ ಬಾವೋದ್ರೇಕದಲ್ಲಿ ನುಡಿದುದೇ ಪ್ರಸ್ತುತ ವಚನ. ತಮ್ಮನ್ನು ಉತ್ತಮ ಕುಲದವರೆಂದು ಜನ ತಿಳಿಯುವುದು ತಾವು ಮೊದಲು ಬ್ರಾಹ್ಮಣರಾಗಿದ್ದರೆಂಬ ಕಾರಣದಿಂದಲೇ ಅಲ್ಲವೇ ಎಂದು ‘ನಾನು ಬ್ರಾಹ್ಮಣನೇ ಅಲ್ಲ, ನಾನು ಬ್ರಾಹ್ಮಣ ವಂಶದಲ್ಲಿ ಹುಟ್ಟಿಯೇ ಇಲ್ಲ’ ಎನ್ನುತ್ತಾರೆ. ತಮ್ಮ ಹುಟ್ಟಿದ ಬಗೆಯನ್ನು ಅತ್ಯಂತ ನಿಮ್ನ ರೀತಿಯಲ್ಲಿ ಕಲ್ಪಿಸಿ ಹೇಳುತ್ತಾರೆ. ‘ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು ಇವರಿಬ್ಬರು ಹೊಲದಲ್ಲಿ ಬೆರಣಿಗೆ ಹೋಗಿ ಸಂಗವ ಮಾಡಿದರು, ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ....’ ಚೆನ್ನಯ್ಯ ಸಾಮಾನ್ಯ ಜನರ ದೃಷ್ಟಿಯಲ್ಲಿ ಮಾದಿಗ, ಅಂತೆಯೇ ಕಕ್ಕಯ್ಯ ಡೋಹಾರ. ಹೀಗಿರುವಾಗ ಅವರೀರ್ವರ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ದಾಸಿಯರು ಲೋಕದ ದೃಷ್ಟಿಯಲ್ಲಿಅದೆಷ್ಟು ನಿಮ್ನ ವರ್ಗದವರಾಗಿರಬೇಕು! ಚೆನ್ನಯ್ಯನ ಮನೆಯಲ್ಲಿರುವ ಆ ದಾಸಿಯ ಮಗನಿಗೂ ಕಕ್ಕಯ್ಯನ ಮನೆಯ ಆ ದಾಸಿ ಮಗಳಿಗೂ ನಾನು ಬಸವಣ್ಣ, ಹುಟ್ಟಿದೆನೆಂದಮೇಲೆ ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ ಮಾತಾದರೂ ಎಲ್ಲಿ ಅವರಾದರೂ ಮದುವೆಯಾದ ದಂಪತಿಗಳೇ? ಅದೂ ಇಲ್ಲ. ಹೊಲದಲ್ಲಿ ಇಬ್ಬರೂ ಬೆರಣಿಯನ್ನಾರಿಸಲು ಹೋಗಿದ್ದರು. ಆಗ ಪರಸ್ಪರ ಆಕರ್ಷಿತರಾಗಿ ಕೂಡಿಕೊಂಡರು. ಆ ಕಾರಣದಿಂದ ನಾನು ಹುಟ್ಟಿದೆ ಎಂದು ಬಸವಣ್ಣನವರು ಎಷ್ಟು ಸಾಧ್ಯವೋ ಅಷ್ಟು ನಿಕೃಷ್ಟವಾಗಿ ತಮ್ಮ ಜನ್ಮವನ್ನು ಕಲ್ಪಿಸಿ ಹೇಳಿದ್ದಾರೆ. ಹೀಗೆ ಮದುವೆಯಾಗದವರಿಗೆ ಹುಟ್ಟಿದ ನನ್ನನ್ನೇ ಉತ್ತಮನೆಂದು ಕರೆದು ಗೌರವಿಸುವುದಾದರೆ ನಿಜವಾದ ತಂದೆ-ತಾಯಿಗಳಿಗೆ ಹುಟ್ಟಿದ ದಾಸಯ್ಯ, ಕಕ್ಕಯ್ಯಗಳು ಅದೆಂತು ಕೀಳಾಗಬಲ್ಲರು? ಎಂಬುದೇ ಇಲ್ಲಿಯ ಇಂಗಿತಾರ್ಥ.

ಈ ವಚನವನ್ನ ಅರ್ಥ ಮಾಡಿಕೊಳ್ಳಲು ನಿಜವಾದ ಹಿಂದೂ ಮನಸ್ಸು ಬೇಕೆ ಹೊರತು ಒಬ್ಬ ಜಾತಿವಾದಿ ಅಥವಾ ಸಂಪ್ರದಾಯವಾದಿಗೆ ಇದರ ಗಾಡತೆ ನಿಲುಕಲು ಸಾಧ್ಯವಿಲ್ಲದ್ದು. ಅಸ್ಪೃಶ್ಯ ಮತ್ತು ಹಿಂದುಳಿದವರಿಗೆ ಸಮಾನತೆ ಕೊಟ್ಟಾಗ ಆ ಅವತಾರ ಪುರುಷ ವಿಶ್ವಗುರು ಬಸವಣ್ಣನವರ ಮೇಲೆ ಅಪಾರ ಗೌರವ ಹುಟ್ಟುವುದು ಸರ್ವೇ ಸಾಮಾನ್ಯ. ಆಗ ತನ್ನನ್ನು ಒಬ್ಬ ಸಾಮಾನ್ಯನಂತೆ ಕಾಣಿ ಎಂದು ಹೇಳಲು ಈ ರೀತಿ ವಚನವನ್ನ ಬರೆದಿದ್ದಾರೆ. ಆದರೆ, ಬಸವ ದ್ವೇಷಿಗಳು ಮತ್ತು ಬಸವಣ್ಣನವರ ಅವಹೇಳನದ ಉದ್ದೇಶದಿಂದಲೆ ಈ ವಚನವನ್ನ ಓದಿದ ಯುವತಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 302 ರ ಅಡಿಯಲ್ಲಿ ಶಿಕ್ಷಾರ್ಹಳು.

ಇಂದು ಈ ರೀತಿ ಬಸವಣ್ಣನವರ ಅವಹೇಳನ ಮಾಡುತ್ತಿರುವ ಸಂಪ್ರದಾಯವಾದಿಗಳೆ ಅಂದು 12 ನೇ ಶತಮಾನದಲ್ಲಿ ಶಿವ ಶರಣರ ಮಾರಣ ಹೋಮ ಮಾಡಿದ ಸಂಪ್ರದಾಯವಾದಿಗಳ ವಾರಸುದಾರರಂತೆ  ವರ್ತಿಸುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ.
 

ಇಷ್ಟೆಲ್ಲ ಆದ ಮೇಲೂ ಮತ್ತೆ ಮತ್ತೆ ಇದೆ ಸಂಪ್ರದಾಯವಾದಿ ಮನಸ್ಥಿತಿಯ ಯುವತಿ ಶಂಕರಾಚಾರ್ಯರು ಮತ್ತು ಬಸವಣ್ಣನವರ ಹೋಲಿಕೆ ಮಾಡಿ ಬಸವಣ್ಣನವರನ್ನ ಅವಹೇಳನ ಮಾಡಲು ಹೋಗಿ ಬಸವಣ್ಣ ಮತ್ತು ಶಂಕರಾಚಾರ್ಯರು ಇಬ್ಬರನ್ನೂ ಅವಹೇಳನ ಮಾಡಿಸಿದ ಅಪಕೀರ್ತಿ ಹಾಸನ ಜಿಲ್ಲೆಯವಳು ಎಂದು ಹೇಳಿ ಕೊಳ್ಳುವ ಅಶ್ವಿನಿ ಎಂಬ ಯುವತಿಗೆ ಸೇರುತ್ತದೆ.  

ಸಂಪ್ರದಾಯವಾದಿಗಳು ಕ್ಲಬ್ ಹೌಸ್ ನಲ್ಲಿ ಬಸವಣ್ಣನವರನ್ನ ಅವಹೇಳನ ಮಾಡಿದ್ದು ಇದು ಮೊದಲೂ ಅಲ್ಲ, ಬಹುಶಃ ಕೊನೆಯೂ ಅಲ್ಲ. ಹಿಂದೊಮ್ಮೆ  ಶಿವಮೊಗ್ಗದ ದಿಲೀಪ್ ನಾಡಿಗ್ ಎಂಬ ವ್ಯಕ್ತಿ ತನ್ನ ಸಂಪ್ರದಾಯ ವಿವರಿಸುವಾಗ ಪ್ರಶ್ನೆ ಒಂದಕ್ಕೆ ಉತ್ತರಿಸುವಾಗ ಜನಿವಾರ ತೆಗೆದ ಬಸವಣ್ಣ ಕೂಡ  ಚಾಂಡಾಲ ಅಂತ ಹೇಳಲು ಯಾವುದೇ ಮುಜುಗರ ಪಡಲಿಲ್ಲ, ಇಂದಿಗೂ ಆ ಮಾತಿಗೆ ಪಶ್ಚಾತ್ತಾಪ ಪಟ್ಟಿಲ್ಲ. ಬದಲಿಗೆ ಬಸವಣ್ಣನವರನ್ನು ಪದೇ ಪದೇ ಅವಹೇಳನ ಮಾಡಿದ ಅಶ್ವಿನೀ ಎಂಬ ಯುವತಿಯ ಬೆಂಬಲಕ್ಕೆ ನಿಂತಿದ್ದು ಈ ಸಂಪ್ರದಾಯವಾದಿಗಳ ಮನಸ್ಥಿತಿಗೆ ಹಿಡಿದ ಕನ್ನಡಿಯಂತಾಗಿದೆ.

ಈ ರೀತಿ ಮುಂದುವರೆದ ಬಸವಣ್ಣನವರ ಉದ್ದೇಶಪೂರಿತ ಅವಹೇಳನಕ್ಕೆ ಕಡಿವಾಣ ಹಾಕಬೇಕು ಎಂದರೆ ಕರ್ನಾಟಕದಾದ್ಯಂತ ಇಂತವರ ಮೇಲೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 302 ರ ಅಡಿ ಪ್ರಕರಣ ದಾಖಲಿಸಿ ಸರಿಯಾದ ಶಾಸ್ತಿ ಮಾಡಲೇ ಬೇಕಿದೆ. ಈ ಲೇಖನ ಆಧರಿಸಿ ದೂರು ದಾಖಲಿಸಲು ಇಚ್ಚಿಸುವವರು ನನ್ನನ್ನು ಸಂಪರ್ಕಿಸಿದರೆ, ನಾನು ಎಲ್ಲಾ ದೂರುಗಳಿಗೂ ಸಾಕ್ಷಿಯಾಗಿ ನಿಲ್ಲಲು ಸಿದ್ದನಿದ್ದೇನೆ.

- ಕಿರಣ್. ಬಿ.

Tuesday, January 21, 2025

ಗಾಂಧೀಜಿ ಬಯಸಿದ್ದು ರಾಮರಾಜ್ಯವೆಂಬ ಖಲೀಫನ ಆಡಳಿತವನ್ನ..!!

ಜನವರಿ22, 2025

ರಘುಪತಿ ರಾಘವ ರಾಜಾರಾಮ್

ಪತೀತ ಪಾವನ ಸೀತಾರಾಂ ||

ಈಶ್ವರ್ ಅಲ್ಲಾ ತೆರೊ ನಾಮ್

ಸಬ್ಕೋ ಸನ್ಮತಿ ದೇ ಭಗವಾನ್ ||

ರಾಮನ ಭಕ್ತರೆಂದು ಕರೆಯಿಸಿಕೊಂಡ ಗಾಂಧೀಜಿಯವರು ಈ ಗೀತೆಯನ್ನ ಎಲ್ಲರಿಗೂ ಕೇಳಿಸಿ ರಾಮ ನಾಮ ಜಪ ಮಾಡುತ್ತಿದ್ದರು. ರಾಮ ಮತ್ತು ರಾಮರಾಜ್ಯದ ಬಗ್ಗೆ ಹತ್ತಾರು ಕಡೆ ಮಾತನಾಡಿದ್ದಾರೆ ಮತ್ತು ಬರೆದಿದ್ದಾರೆ. ರಾಮನ ಬಗ್ಗೆ ಅದೆಷ್ಟು ಮಾತಾಡಿದ್ದಾರೆಂದರೆ ಇತಿಹಾಸಕಾರರು ಗಾಂಧೀಜಿಯವರು ರಾಮನ ಪರಮ ಭಕ್ತರೆಂದೇ ಚಿತ್ರಿಸಿ ತೋರಿಸಿದ್ದಾರೆ. ಗಾಂಧೀಜಿಯವರು ತಮ್ಮ ಜೀವನದ ಕೊನೆಯ ಕ್ಷಣದಲ್ಲಿ “ಹೇ ರಾಮ್” ಎಂದು ಉದ್ಗರಿಸಿದರೆಂದು ನಮಗೆ ತಿಳಿಸಲಾಗುತ್ತದೆ. ಎಲ್ಲ ಇತಿಹಾಸಕಾರರು ಗಾಂಧೀಜಿಯವರ ಪತ್ರಗಳು, ಪ್ರಾರ್ಥನಾ ಸಭೆಯ ಭಾಷಣಗಳು ಮತ್ತು ಅವರ ಬರಹಗಳನ್ನ ಆಧಾರವಾಗಿಟ್ಟುಕೊಂಡೇ  ಅಭಿಪ್ರಾಯ ಮಂಡಿಸುತ್ತಾರೆ. ಆದರೆ ರಾಮರಾಜ್ಯದ ಬಗ್ಗೆ ಗಾಂಧೀಜಿಯವರು ಆಳವಾಗಿ ಮತ್ತು ಸ್ಪಷ್ಟವಾಗಿ ಪ್ರತಿಪಾದಿಸಿದ ಎಷ್ಟೋ ವಿಷಯಗಳು ವಿಮರ್ಶೆಯಿಂದ ತಪ್ಪಿಸಿಕೊಂಡಿವೆ. ನಿಜವಾಗಿ ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆ ಎನಾಗಿತ್ತು ಎಂಬುದನ್ನ ಅವರ 1929ರ ಭೊಪಾಲ್ ಮತ್ತು 1947 ರ ಹೈಂಚಾರ್ ಭಾಷಣಗಳಿಂದ ತಿಳಿಯಬಹುದು.

ಭೋಪಾಲ್ ಸಾರ್ವಜನಿಕ ಸಭೆ: ಸೆಪ್ಟೆಂಬರ್ 10, 1929 ರಂದು ಭೊಪಾಲ್ ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತಾಡುತ್ತಾ ಗಾಂಧೀಜಿಯವರು ಹೀಗೆ ವಿವರಿಸುತ್ತಾರೆ;

“ನನ್ನ ಪ್ರಕಾರ ರಾಮರಾಜ್ಯವೆಂದರೆ ಅದು ಹಿಂದೂ ರಾಜ್ಯವಲ್ಲ, ಬದಲಿಗೆ ಅದು ದೇವರ ರಾಜ್ಯ. ನನಗೆ ರಾಮ ಮತ್ತು ರಹಿಮ ಎರಡೂ ಒಂದೇ. ಸತ್ಯ ಮತ್ತು ಸನ್ನಡತೆಯ ಏಕ ದೇವನಲ್ಲದೆ ಬೇರೆ ಯಾವ ದೇವರನ್ನೂ ನಾನು ಒಪ್ಪುವುದಿಲ್ಲ. ನನ್ನ ಕಲ್ಪನೆಯ ರಾಮ ಈ ಭೂಮಿಯ ಮೇಲೆ ಬದುಕಿದ್ದನೋ ಅಥವಾ ಇಲ್ಲವೋ ಗೊತ್ತಿಲ್ಲ, ಆದರೆ ಪುರಾತನ ಸಮಯದ ಆದರ್ಶ ರಾಮರಾಜ್ಯವು ಒಂದು ನಿಜವಾದ ಪ್ರಜಾಪ್ರಭುತ್ವವಾಗಿತ್ತು. ಅಲ್ಲಿ ಪ್ರತಿ  ಪ್ರಜೆಯೂ ಯಾವುದೇ ಸಮಯ ವಿಳಂಬವಿಲ್ಲದ ಮತ್ತು ದುಬಾರಿಯಲ್ಲದ ಕಾರ್ಯವಿಧಾನದಿಂದ ನ್ಯಾಯ ಪಡೆಯುವರು. ಅಲ್ಲಿ ನಾಯಿಯೂ ಕೂಡ ನ್ಯಾಯ ಪಡೆಯಿತೆಂದು ಕವಿ ವರ್ಣಿಸಿದ್ದಾನೆ.” (Young India, 19-9-1929) (Collected Works of Mahatma Gandhi, Volume 47, ಪುಟ 41)

ಗಾಂಧೀಜಿಯವರು ಇಲ್ಲಿ ತಾವೇ ಹೇಳಿರುವಂತೆ ಅವರ ಕಲ್ಪನೆಯ ರಾಮ ಎಂದಾದರೂ ಭೂಮಿಯ ಮೇಲೆ ಬದುಕಿದ್ದನೋ ಅಥವಾ ಇಲ್ಲವೋ ಎನ್ನುವುದು ಅವರಿಗೆ ಗೊತ್ತಿಲ್ಲ, ಅಂದರೆ ಅವರ ಪಾಲಿಗೆ ರಾಮನೊಬ್ಬ ಕಾಲ್ಪನಿಕ ವ್ಯಕ್ತಿ ಹಾಗೂ ರಾಮಾಯಣ ಒಂದು ಮಹಾಕಾವ್ಯವಷ್ಟೆ. ರಾಮ ಮತ್ತು ರಹಿಮ ಎರಡೂ ಒಂದೇ ಎನ್ನುತ್ತಿದ್ದ ಗಾಂಧೀಜಿ ಬಯಸಿದ್ದು ದೇವರ ರಾಜ್ಯವನ್ನು (Kingdom of God). ಈ ದೇವರ ಸಾಮ್ರಾಜ್ಯವನ್ನ ಗಾಂಧೀಜಿಯವರು ಮತ್ತಷ್ಟು ಸ್ಪಷ್ಟವಾಗಿ ವಿವರಿಸಿದ್ದು ದಶಕಗಳ ನಂತರ 1947 ರಲ್ಲಿ.

ಹೈಂಚಾರ್ ಪ್ರಾರ್ಥನಾ ಸಭೆ: ಮತ್ತೊಮ್ಮೆ ಫೆಬ್ರುವರಿ 26, 1947 ರಂದು ಬಂಗಾಳದ ಹೈಂಚಾರ್ ಪ್ರಾರ್ಥನಾ ಸಭೆಯಲ್ಲಿ ಮಾತಾಡುತ್ತಾ ಗಾಂಧೀಜಿಯವರು ತಮ್ಮ ಪರಿಕಲ್ಪನೆಯ ರಾಮರಾಜ್ಯದ ವಿಸ್ತಾರವಾದ ವಿವರಣೆ ಕೊಡುತ್ತಾರೆ.

ಗಾಂಧೀಜಿಯವರು ತಮ್ಮ ಆದರ್ಶ ಸಮಾಜಕ್ಕೆ ರಾಮರಾಜ್ಯ ಎಂದು ಹೆಸರಿಸಿದರು. “ರಾಮ ರಾಜ್ಯವೆಂದರೆ ಹಿಂದೂಗಳ ಆಡಳಿತವೆಂದು ತಿಳಿಯುವ ತಪ್ಪನ್ನು ಯಾರೂ ಮಾಡಬಾರದು. ಖುದಾ ಅಥವಾ ಗಾಡ್ ಅನ್ನುವುದು ನನ್ನ ರಾಮನಿಗಿರುವ ಇತರೆ ಹೆಸರುಗಳು. ನನಗೆ, ಭೂಮಿಯ ಮೇಲಿರುವ ದೇವರ ಸಾಮ್ರಾಜ್ಯದಂತೆ ಖುದಾನ ಆಡಳಿತ ಬೇಕು. ಇದನ್ನು ತಕ್ಕ ಮಟ್ಟಿಗೆ ಮೊದಲ ನಾಲ್ಕು ಖಲೀಫರ ಆಡಳಿತಕ್ಕೆ ಹೋಲಿಸಬಹುದು. ಇಂತ ರಾಜ್ಯದ ಸ್ಥಾಪನೆಯಿಂದ ಕೇವಲ ಭಾರತೀಯ ಜನರಿಗಷ್ಟೆ ಅಲ್ಲದೆ ಇಡೀ ಪ್ರಪಂಚದ ಕಲ್ಯಾಣವಾಗುವುದು” ಎಂದು ಪ್ರತಿಪಾದಿಸಿದರು. (Collected Works of Mahatma Gandhi, Volume 94, ಪುಟ 46)


ಈ ಬಾರಿಯ ರಾಮರಾಜ್ಯದ ವ್ಯಾಖ್ಯಾಯನವು ಮತ್ತಷ್ಟು ಸ್ಪಷ್ಟವಾಗಿದೆ. ಇಲ್ಲಿ ಖುದಾನ ರಾಜ್ಯವೆಂದರೆ ಅದು ಖಲೀಫನ ಮೂಲಕ ಭೂಮಿಯ ಮೇಲೆ ಸ್ಥಾಪಿಸಲಾಗುವ ಅಲ್ಲಾನ ಆಡಳಿತ. ಹಾಗಾಗಿಯೇ ಗಾಂಧೀಜಿಯವರು ಅವರ ಕಲ್ಪನೆಯ ರಾಮರಾಜ್ಯವನ್ನು ನೇರವಾಗಿ ಮೊದಲ ನಾಲ್ಕು ಖಲೀಫರ ಆಡಳಿತಕ್ಕೆ ಹೋಲಿಸಿದ್ದು. ಇಸ್ಲಾಂನ ನಂಬುಗೆಯಂತೆ ಲೋಕ ಕಲ್ಯಾಣಕ್ಕಾಗಿ ಖಲೀಫನ ಮೂಲಕ ಇಡೀ ಪ್ರಪಂಚವು ಖುದಾನ ಆಳ್ವಿಕೆಗೆ ಒಳಪಡಬೇಕು. ಗಾಂಧೀಜಿಯವರು ಅವರ ಕಲ್ಪನೆಯ ರಾಮರಾಜ್ಯವನ್ನು ಮೊದಲ ನಾಲ್ಕು ಖಲೀಫರ ಆಡಳಿತಕ್ಕೆ ಹೋಲಿಸಲು ಕಾರಣ ಆ ನಾಲ್ಕೂ ಖಲೀಫರು ಪ್ರವಾದಿ ಮಹಮ್ಮದ್ ಕಾಲದವರು ಮತ್ತು ಇಸ್ಲಾಂ ಜಗತ್ತಿನಲ್ಲಿ ಇವರುಗಳ ಆಡಳಿತವನ್ನ ಅಲ್ ರಶಿದುನ್ (ಸರಿಯಾಗಿ ಮಾರ್ಗದರ್ಶನ ಪಡೆದವರು) ಎನ್ನುತ್ತಾರೆ. ಈ ಕಾರಣದಿಂದಾಗಿಯೇ ಗಾಂಧೀಜಿಯವರು ತಮ್ಮ ಕಲ್ಪನೆಯ ರಾಮರಾಜ್ಯವನ್ನು ಖಲೀಫರ ಆಡಳಿತಕ್ಕೆ ಹೊಲಿಸಿದ್ದು ಮತ್ತು ಅದರಿಂದ ಲೋಕ ಕಲ್ಯಾಣವಾಗುವುದೆಂದು ಪ್ರತಿಪಾದಿಸಿದ್ದು..!

ಏಪ್ರಿಲ್ 28, 1946 ರಂದು ಹರಿಜನ ಪತ್ರಿಕೆಯಲ್ಲಿ ಪ್ರಕಟವಾದ ಮತ್ತೊಂದು ಲೇಖನದಲ್ಲಿ ಗಾಂಧೀಜಿಯವರು ತಾವು ಮಾತನಾಡಿದ ರಾಮನಿಗೂ ರಾಜ ದಶರಥನ ಮಗ, ಅಯೋಧ್ಯೆಯ ಆಡಳಿತಗಾರನಾದ ಐತಿಹಾಸಿಕ ರಾಮನಿಗೂ ಯಾವುದೇ ಸಂಭಂದವಿಲ್ಲವೆಂದು ಮತ್ತೊಮ್ಮೆ ಸ್ಪಷ್ಟೀಕರಿಸುತ್ತಾರೆ.

ಗಾಂಧೀಜಿಯವರ ಕಾಲದಲ್ಲೂ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ಕಟ್ಟಲು ಹೋರಾಟ ಮಾಡುತ್ತಿದ್ದ ಜನರಿದ್ದರು. ಗಾಂಧೀಜಿಯವರ ರಾಮ ಧುನ್ ಕೇಳಿ ಅವರೊಬ್ಬ ಪರಮ ರಾಮ ಭಕ್ತರೆಂದೇ ಭಾವಿಸಿದವರಿದ್ದರೂ, ಇನ್ನೊಂದೆಡೆ ರಾಮ ಕಾಲ್ಪನಿಕ, ರಾಮರಾಜ್ಯವೆಂದರೆ ಅದು ಹಿಂದೂಗಳ ರಾಜ್ಯವಲ್ಲವೆಂದು ಅರ್ಥ ಮಾಡಿಕೊಂಡ ರಾಮ ಭಕ್ತರು ಅದೆಷ್ಟು ನೊಂದುಕೊಂಡಿರಬಹುದು. ಅಂತೂ, ಐದು ಶತಮಾನಗಳ ನಿರಂತರ ಹೋರಾಟದ ಪರಿಣಾಮ ಜನವರಿ 22, 2024 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯಾಯಿತು. ಈ ವೇಳೆ ಹಿನ್ನೆಲೆಯಲ್ಲಿ ಪ್ರಸಾರವಾದ

ರಘುಪತಿ ರಾಘವ ರಾಜಾರಾಮ್

ಪತೀತ ಪಾವನ ಸೀತಾರಾಂ ||

ಸುಂದರ ವಿಗ್ರಹ ಮೇಘಶ್ಯಾಮ್

ಗಂಗಾ ತುಳಸಿ ಸಾಲಿಗ್ರಾಂ ||

ಎಂಬ ಮೂಲ ಗೀತೆ ಕೇಳಿ ನನ್ನಂತೆಯೇ ಸಾಕಷ್ಟು ರಾಮ ಭಕ್ತರಿಗೆ ಸ್ವಲ್ಪ ನೆಮ್ಮದಿ ಕೊಟ್ಟಿರಬಹುದು. ಆ ದಿನ ರಾಮ ಮಂದಿರ ಮತ್ತು ರಾಮಧುನ್ ಎರಡನ್ನೂ ಸರಿಪಡಿಸಲಾಯಿತು. ಭಾರತೀಯ ಸಂಸ್ಕೃತಿಗೆ ಸಂಭಂದಿಸಿದ ವಿಷಯಗಳನ್ನ ಸರಿಪಡಿಸಿದ್ದು ಸ್ವಲ್ಪವೇ, ಸರಿಪಡಿಸಬೇಕಾಗಿದ್ದು ಸಾಕಾಷ್ಟಿದೆ.

ರಾಮರಾಜ್ಯಕ್ಕೆ ಜಯವಾಗಲಿ..!!

-       ಕಿರಣ್ ಬಿ



Monday, December 2, 2024

ಯಾವ ಪುರುಷಾರ್ಥಕ್ಕಾಗಿ “ರಾಷ್ಟ್ರೀಯ ಶಿಕ್ಷಣ ದಿನ”ದ ಆಚರಣೆ...!!

December 2, 2024

ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾನ ಅಬುಲ್ ಕಲಾಂ ಆಜಾದ್ ರ ಸ್ಮರಣೆಗಾಗಿ ಅವರ ಜನ್ಮ ದಿನವಾದ ನವೆಂಬರ್11ರಂದು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ. 2008 ರಲ್ಲಿ ಮೊದಲ ಬಾರಿಗೆ “ರಾಷ್ಟ್ರೀಯ ಶಿಕ್ಷಣ ದಿನ” ವಾಗಿ ಘೋಷಿಸಿ ಆಚರಣೆ ಪ್ರಾರಂಬಿಸಲಾಯಿತು. ಯಾವ ಮೌಲಾನ ಆಜಾದರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸುತ್ತಾರೋ ಅವರ ಬಗ್ಗೆ ಕನಿಷ್ಠ ಮುಖ್ಯಾಂಶಗಳನ್ನಾದರೂ ತಿಳಿದುಕೊಳ್ಳಲೆ ಬೇಕು.

ಆಜಾದರು ಜನಿಸಿದ್ದು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಮತ್ತು ಅವರ ತಂದೆ ಇಸ್ಲಾಂನ ವಿಧ್ವಾಂಸರಾಗಿದ್ದರಿಂದ ಅವರ ಶಿಕ್ಷಣ ಇಸ್ಲಾಂನ ಸಾಂಪ್ರದಾಯಿಕ ಪದ್ದತಿಯಂತೆಯೇ ಅರೇಬಿಕ್ ಭಾಷೆಯಲ್ಲಿ ಆಯಿತು. ಅವರು ಪರ್ಶಿಯನ್ ಜೊತೆಗೆ ಬೆಂಗಾಲಿ, ಹಿಂದಿ, ಇಂಗ್ಲಿಷ್ ಹಾಗೂ ಉರ್ದು ಭಾಷೆಗಳನ್ನ ಬಲ್ಲವರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ತಂದೆಯೊಂದಿಗೆ ಭಾರತಕ್ಕೆ ಮರಳಿದ ನಂತರ ಆಜಾದರ ಇಸ್ಲಾಂನ ಸಾಂಪ್ರದಾಯಿಕ ಶಿಕ್ಷಣ ಮುಂದುವರೆಯಿತು, ಇವರು ಕುರಾನನ್ನು ಆಳವಾಗಿ ಅಧ್ಯಯನ ಮಾಡಿ ವ್ಯಾಖ್ಯಾನಗಳನ್ನ ಬರೆಯುತ್ತಾ ಮೌಲಾನ ಆದವರು..!

ಮೌಲಾನ ಆಜಾದರು ಚಿಕ್ಕ ವಯಸ್ಸಿನಲ್ಲಿಯೇ ಇಸ್ಲಾಂ ಕುರಿತ ಲೇಖನಗಳನ್ನ ಬರೆಯುತ್ತಾ ಕೇವಲ 16ನೇ ವಯಸ್ಸಿಗೆ ತಮ್ಮ ಸ್ವಂತ ಮಾಸಿಕ ಪತ್ರಿಕೆಯನ್ನು ಸಂಪಾದಿಸಿದವರು..! ಕ್ರಿ ಶ. 1908 ರಲ್ಲಿ ತಮ್ಮ 20ನೇ ವಯಸ್ಸಿಗೆ ಇಸ್ಲಾಂ ರಾಷ್ಟ್ರಗಳಾದ ಈಜಿಪ್ಟ್ , ಸಿರಿಯ, ಇರಾಕ್, ಟರ್ಕಿ ಗಳ ಪ್ರವಾಸ ಮಾಡಿ ಅಲ್ಲಿಯ ಇಸ್ಲಾಂನ ಆಗುಹೋಗುಗಳ ಬಗ್ಗೆ ಅಧ್ಯಯನ ಮಾಡಿ ಬಂದರು. ಅಖಿಲ ಇಸ್ಲಾಂ (Pan Islam) (ದೇಶ, ಗಡಿಗಳಿಲ್ಲದ ಇಸ್ಲಾಂ ಪ್ರಪಂಚ) ತತ್ವದಲ್ಲಿ  ಅಪಾರ ನಂಬಿಕೆ ಉಳ್ಳವರಾಗಿದ್ದರು.

ಆಜಾದರು ಕ್ರಿ.ಶ. 1912 ರಲ್ಲಿ ಅಲ್ ಹಿಲಾಲ್ಎನ್ನುವ ವಾರ ಪತ್ರಿಕೆ ಆರಂಬಿಸಿ ಅದರ ಮೂಲಕ ಶುದ್ಧ ಇಸ್ಲಾಂ ಮತ ಪ್ರಚಾರದ ಜೊತೆ ಭಾರತದ ಸ್ವಾತಂತ್ರದ ಚಳುವಳಿಯಲ್ಲಿ ಮುಸಲ್ಮಾನರು ಭಾಗವಹಿಸಲು ಪ್ರೇರೇಪಿಸುತ್ತಿದ್ದರು. ಆ ಪತ್ರಿಕೆಯು ಪ್ರಾರಂಭವಾಗಿ ಎರಡು ವರ್ಷಗಳ ನಂತರ 1914 ರಲ್ಲಿ ಬ್ರಿಟಿಷರು ಇದನ್ನ ನಿಷೇದಿಸಿದರು. ಮತ್ತೆ 1916 ರಲ್ಲಿ ಬೇರೆಯ ಹೆಸರಿನಲ್ಲಿ ಪ್ರಾರಂಭಿಸಿದ ಪತ್ರಿಕೆಯೂ 6 ತಿಂಗಳಲ್ಲಿ ನಿಂತಿತು. ಕುರಾನ್ ಭಾಷಾಂತರ ಮಾಡಿ ಕೃತಿಗಳನ್ನ ಬರೆದರು.

ಮೌಲಾನ ಅಜಾದರಿಗೆ ಭಾರತದ ರಾಷ್ಟ್ರವಾದ ಮತ್ತು ಪ್ಯಾನ್ ಇಸ್ಲಾಂ ತತ್ವ ಎರಡೂ ಬೇರ್ಪಡಿಸದ ಸಂಗತಿಗಳಾಗಿದ್ದವು. ಅವರು ಹೀಗೆ ಬರೆಯುತ್ತಾರೆ,ಸ್ವಾತಂತ್ರಕ್ಕಾಗಿ ಹೋರಾಡುವುದು ಹಿಂದುಗಳಿಗೆ ದೇಶ ಭಕ್ತಿಯ ವಿಚಾರ ಆಗಿರಬಹುದು, ಆದರೆ ಅದು ಮುಸಲ್ಮಾನರಿಗೆ ಕುರಾನ್ ಪ್ರಕಾರ ಧಾರ್ಮಿಕವಾದದ್ದು” (Dec 18,2012, ಅಲ್ ಹಿಲಾಲ್). ಇಲ್ಲಿ ಆಜಾದರು ಪ್ರತಿಪಾದಿಸುತ್ತಿರುವುದು ಗಜ್ವ ಎ ಹಿಂದ್ ನ ಸಿದ್ದಾಂತವನ್ನ ಎಂದು ಕುರಾನ್ ಮತ್ತು ಹದಿತ್ ಗಳ ಬಗ್ಗೆ ಗೊತ್ತಿದ್ದವರಿಗೆ ಸುಲಭವಾಗಿ ಅರ್ಥವಾಗುವ ವಿಷಯ. ಗಜ್ವಾ ಎ ಹಿಂದ್ ಎಂದರೇ "ಭಾರತದ ಮೇಲೆ ಯುದ್ದ" ಎಂದರ್ಥ, ಪ್ಯಾಲೆಸ್ಟೀನ್ ಪರ, ಪಾಕಿಸ್ತಾನ ಪರ ಘೋಷಣೆ ಮಾಡೋ ಭಾರತೀಯರು ಕಾಣಸಿಗಲು ಇದೆ ಗಜ್ವಾ ಎ ಹಿಂದ್ ಕಾರಣವಿರಬಹುದು.

ಹಿಂದೂಗಳ ಜೊತೆಗೂಡಿ ಬ್ರಿಟಿಷರ ವಿರುದ್ದ ಹೋರಾಡಲು ಸಮರ್ಪಿತ ಮುಸಲ್ಮಾನರ ಒಂದು ಪಡೆಯನ್ನ ರಚಿಸುವ ಸಲುವಾಗಿ ಏಪ್ರಿಲ್ 1913ರಲ್ಲಿಅವರ ಪತ್ರಿಕೆಯಲ್ಲಿ ಕರೆ ಕೊಟ್ಟಾಗ ಕೇವಲ ಒಂದು ವಾರದಲ್ಲಿ 800 ಜನ ಮುಸಲ್ಮಾನರು ನೋಂದಾಯಿಸಿದ್ದರು. ಡಿಸೆಂಬರ್ 1913ರಲ್ಲಿ ಆಜಾದರು ಹಿಜ್ಬುಲ್ಲಾ (Party of God) ಸ್ಥಾಪಿಸಿರುವುದಾಗಿ ಘೋಷಿಸುತ್ತಾರೆ. ಇದರ ಮೂಲಕ ಇಸ್ಲಾಂ ತತ್ವಕ್ಕೆ ಬದ್ದರಾದವರು ದೇವರ ಇಚ್ಚೆಯಂತೆ ಜನರ ಒಳಿತಿಗಾಗಿ ವ್ಯವಸ್ಥಿತ ಸರಕಾರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ’.ಅದರ ನಿಯಂತ್ರಣ ಮಂಡಳಿಯ ಕಾರ್ಯ ಮತ್ತು ವಿಧಾನಗಳು ಗುಪ್ತವಾಗಿರುತ್ತವೆ” ಎಂದು ಬರೆದಿದ್ದರು. ಆದರೆ ತಮ್ಮ ಮಹತ್ವ ಕಡಿಮೆ ಆಗಬಹುದು ಅನ್ನುವ ಭಯದಲ್ಲಿ ಉಲೇಮ(ಇಸ್ಲಾಂನ ಅಧಿಕೃತ ವಖ್ತಾರರು) ಗಳು ಬೆಂಬಲ ಕೊಡಲಿಲ್ಲ. ಇದರಿಂದಾಗಿ ಹಿಜ್ಬುಲ್ಲಾ ಯಶಸ್ವಿ ಆಗಲಿಲ್ಲ. ಒಂದು ವೇಳೆ ಅಂದು ಹಿಜ್ಬುಲ್ಲಾ ಯಶಸ್ವಿ ಆಗಿದ್ದರೆ, ಇಂದು ಲೆಬನಾನ್ ನ ಹಿಜ್ಬುಲ್ಲಾಗಳು ಕಾಫಿರರ ನಾಶಕ್ಕೆ ತೊಡಗಿದಂತೆ ಅಜಾದರ ಹಿಜ್ಬುಲ್ಲಾ ಭಾರತೀಯ ಹಿಂದೂಗಳ ನಾಶಕ್ಕೆ ನಿಲ್ಲುತ್ತಿದ್ದವೇ ಎಂಬ ಪ್ರಶ್ನೆ ಮೂಡದಿರದು.

ಅಜಾದರು 1914ರಲ್ಲಿ ಹಿಜ್ಬುಲ್ಲಾ ವಿಫಲತೆ ಬಗ್ಗೆ ಹೀಗೆ ಬರೆಯುತ್ತಾರೆ, “ಉಲೇಮಗಳು ಮತ್ತು ಸೂಫಿ ಪಂಗಡಗಳ ಮುಖ್ಯಸ್ತರಿಗೆ ಅವರ ಕರ್ತವ್ಯಗಳನ್ನ ನೆನಪಿಸುತ್ತೇನೆಂದು ಬಯಸಿದ್ದೆ, ಇಂತ ಸವಾಲಿನ ಸಮಯದಲ್ಲಿ ನನ್ನ ಜೊತೆ ನಿಲ್ಲುತ್ತಾರೆಂದುಕೊಂಡೆ ಆದರೆ ಒಬ್ಬರನ್ನು ಬಿಟ್ಟು ಉಳಿದೆಲ್ಲರೂ ಇದೊಂದು ಪ್ರಲೋಭನೆ ಎಂದು ತಿರಸ್ಕರಿಸಿದರು..!” ಸೂಫಿಗಳು ಮತ್ತು ಉಲೇಮಾಗಳಿಗೆ ಅವರ ಯಾವ ಕರ್ತವ್ಯ ನೆನಪಿಸಲು ಇಚ್ಚಿಸಿದ್ದರು ಎಂದು ಆಲೋಚಿಸಿದರೆ, "ಗಜ್ವಾ ಎ ಹಿಂದ್" "ದಾರುಲ್ ಹರಬ್ ನಿಂದ ದಾರುಲ್ ಇಸ್ಲಾಂಗೆ" ತತ್ವದ ಬಗ್ಗೆ ಇರಬಹುದು ಎಂದು ಅನ್ನಿಸದೆ ಇರಬಹುದು.

ನಂತರ ಮೌಲಾನರು ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದು ಖಿಲಾಫತ್ ಚಳುವಳಿಯ ಮೂಲಕ. ಈ ಚಳುವಳಿಯಲ್ಲಿ ಅವರು ಸಂಪೂರ್ಣವಾಗಿ ತೊಡಗಿಸಿಕೊಂಡು ಖಿಲಾಫತ್ ಸಮಿತಿಯ ಅಧ್ಯಕ್ಷರೂ ಆದರು. ಈ ಖಿಲಫತ್ ಚಳುವಳಿಯ ಉದ್ದೇಶ ದೂರದ ಟರ್ಕಿಯ ಒಟ್ಟೊಮನ್ ಸಾಮ್ರಾಜ್ಯದ ಸುಲ್ತಾನನನ್ನು ಇಸ್ಲಾಮಿನ ಖಲೀಫನಾಗಿ ಉಳಿಸಿಕೊಳ್ಳುವುದಾಗಿತ್ತು. ಅಂದರೆ ಭಾರತದ ಸ್ವಾತಂತ್ರಕ್ಕೂ ಈ ಖಿಲಾಫತ್ ಗೂ ಏನೂ ಸಂಭಂದವಿಲ್ಲ. ಅಜಾದರ ಇಸ್ಲಾಂ ಬಗೆಗಿನ ಕಾಳಜಿ ಕಣ್ಣಿಗೆ ರಾಚುವಂತದ್ದು. 

1921 ರಲ್ಲಿ ಖಿಲಾಫತ್ ಹೋರಾಟದ ಸಂಧರ್ಭ ಅಜಾದರು, ಬ್ರಿಟಿಷರ ವಿರುದ್ದ ಹೋರಾಡಲು ಮುಸಲ್ಮಾನರಿಗೆ ಕರೆ ಕೊಟ್ಟು ಹಿಂದೂ-ಮುಸ್ಲಿಂ ಸಹಕಾರದ ಮಹತ್ವವನ್ನು ಪ್ರವಾದಿ ಮೊಹಮ್ಮದರ ಉದಾಹರಣೆಯೊಂದಿಗೆ ವಿವರಿಸುತ್ತಾರೆ.

ಪ್ರವಾದಿ ಮೊಹಮ್ಮದರು ಮದೀನಾಕ್ಕೆ ವಲಸೆ ಬಂದಾಗ, ಅಲ್ಲಿದ್ದ ಯಹೂದೀ ಜನರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು, ಕೊನೆಯಲ್ಲಿ ಮುಸಲ್ಮಾನರು-ಮುಸಲ್ಮಾನೇತರರು ಒಂದು ದೇಶವಾಗುವರು(ಉಮ್ಮಹ್ ವಹೀದಹ್) ಎಂದು ಆ ಒಪ್ಪಂದದಲ್ಲಿ ಬರೆದಿತ್ತು. ಉಮ್ಮಹ್ = ಕೋಮು ಅಥವಾ ದೇಶ, ವಹೀದಹ್=ಒಂದು. ಭಾರತದ ಮುಸಲ್ಮಾನರು ತಮ್ಮ ಕರ್ತವ್ಯ ನಿರ್ವಹಣೆಯನ್ನ ಹಿಂದೂಗಳ  ಸಹಕಾರವಿಲ್ಲದೆ ಮಾಡಲಾಗದು. ಇದು ಪ್ರವಾದಿ ಮೊಹಮ್ಮದರ ಜೀವನದ ಘಟನೆಯನ್ನೇ ಆಧರಿಸಿದ್ದು ಮತ್ತು ಪ್ರವಾದಿಗಳೇ ಮುಸ್ಲಿಂ ಮತ್ತು  ಮುಸ್ಲಿಮೇತರ ದೇಶ ರಚಿಸಲು ಬಯಸಿದ್ದು. ಇಂತ ಉದಾಹರಣೆ ನಾವು ಪಾಲಿಸಿ, ಹಿಂದೂಗಳ ಜೊತೆ ಸಹಕಾರದಿಂದ ನಡೆದುಕೊಂಡು ಮೊದಲು ಬ್ರಿಟಿಷರ ಗುಲಾಮಿತನದಿಂದ ಮುಕ್ತರಾಗಬೇಕು, ನಂತರ ಉಳಿದದ್ದನ್ನು ನೋಡಿಕೊಳ್ಳಬಹುದೆಂದು ಪ್ರತಿಪಾದಿಸಿದರು. (ಪು.118, Muslim Politics) ಅಂದಹಾಗೆ, ಈಗ ಮೆಕ್ಕಾದಲ್ಲಿ ಯಹೂದಿಗಳು ಸಿಗಲು ಸಾಧ್ಯವೇ..? ಅಂದರೆ ಇತಿಹಾಸಕಾರರು ಚಿತ್ರಿಸಿರುವ ಹಿಂದೂ ಮುಸ್ಲಿಂ ಐಕ್ಯತೆ ಕೇವಲ ಅನುಕೂಲಸಿಂಧು ಎಂಬುದ ಅರಿಯಬೇಕಿದೆ.

ಮೌಲಾನ ಆಜಾದರು ಜಾಮಿಯ ಮಿಲಿಯ ಇಸ್ಲಾಮಿಯ ಸ್ಥಾಪನೆಯಲ್ಲಿ ಮಹತ್ತರವಾದ ಪಾತ್ರ ವಹಿಸಿದರು. ಈ ಎಲ್ಲದರಿಂದ ಅರ್ಥವಾಗುವುದು, ಆಜಾದರು ಒಬ್ಬ ನಿಷ್ಠಾವಂತ ಇಸ್ಲಾಂವಾದಿ ಆಗಿದ್ದಷ್ಟೆ ಅಲ್ಲದೆ, ವಿಭಜನೆ ವಿರೋದಿಸಿದ ಅವರು ಅಖಂಡ ಭಾರತವನ್ನು ಇಸ್ಲಾಂ ಆಳ್ವಿಕೆಗೆ ಒಳಪಡಿಸಲು ಬಯಸಿದವರಾಗಿದ್ದರೆಂದು.

ಹೀಗೆ, ಮೌಲಾನ ಆಜಾದರು ಇಸ್ಲಾಂಗಾಗಿ ಅವಿರತವಾಗಿ ದುಡಿದರು ಹಾಗೂ ಮೊಘಲರ ಅಟ್ಟಹಾಸದ ನೈಜ ಇತಿಹಾಸವನ್ನ ಶಾಲೆಯಲ್ಲಿ ಮಕ್ಕಳಿಗೆ ಕಲಿಸಿದರೆ ಸಾಮರಸ್ಯ ಹಾಳಾಗುವುದು ಎಂದು ಪ್ರತಿಪಾದಿಸಿದರು. ಅದೇ ಮಾದರಿಯಲ್ಲಿ ಶಾಲೆಯ ಮಕ್ಕಳಿಗೆ ಸುಳ್ಳು ಅಥವಾ ಪೊಳ್ಳು ಇತಿಹಾಸವನ್ನ ಹೇಳಿಕೊಡುವ ಪರಿಪಾಠ ಇಂದಿಗೂ ಮುಂದುವರೆದಿರುವುದು ವಿಪರ್ಯಾಸವೆ ಸರಿ. ಹಾಗೂ ಭಾರತದ ಮೂಲ ಸಂಸ್ಕೃತಿಗೆ ಅನುಗುಣವಾದ ಶಿಕ್ಷಣಕ್ಕೆ ಅವರು ಕೊಟ್ಟ ಕೊಡುಗೆ ನಗಣ್ಯ. ಇವರ ಸ್ಮರಣೆಗಾಗಿ ರಾಷ್ಟ್ರೀಯ ಶಿಕ್ಷಣ ದಿನ ಆಚರಿಸುವುದು ಎಷ್ಟು ಸಮಂಜಸ ಮತ್ತು ಯಾವ ಪುರುಷಾರ್ಥಕ್ಕಾಗಿ ಗೊತ್ತಿಲ್ಲ..!!

~ ಕಿರಣ್. ಬಿ.



Friday, November 15, 2024

ಅಂಬೇಡ್ಕರ್ ಇಸ್ಲಾಂ ಸೇರಲು ಬಯಸಿದ್ದರೆಂಬ ಸುಳ್ಳು..


ಹೊಸದಿಗಂತ

ನವೆಂಬರ್ 16, 2024.

ಚುನಾವಣಾ ರಾಜಕೀಯದ ಮೇಲಾಟದಲ್ಲಿ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಲೇ ಬೇಕು, ಪ್ರತಿಯೊಂದು ಸಮುದಾಯವನ್ನ ಹೇಗಾದರೂ ಮಾಡಿ ಓಲೈಸಿ ವೋಟು ಗಿಟ್ಟಿಸಬೇಕು ಎಂದು ಎಲ್ಲ ರೀತಿಯ ತಂತ್ರಗಾರಿಕೆ ಮಾಡುವುದು ಹೊಸದಲ್ಲ. ಆದರೆ ಇತಿಹಾಸವನ್ನೇ ತಿರುಚುವ ಅಥವಾ ನೇರವಾಗಿ ಸುಳ್ಳು ಹೇಳುವ ಹಂತಕ್ಕೆ ಹೋಗುವುದು ಎಷ್ಟು ಸರಿ.

ಹೌದು, ಶಿಗ್ಗಾವಿ ವಿಧಾನಸಭ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೇಸ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡುತ್ತಿದ ಸಯ್ಯದ್ ಅಜ್ಜಂಪೀರ್ ಖಾದ್ರಿಯವರು ಆದಿ ಜಾಂಬವ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸ್ವೀಕಾರ ಮಾಡಲು ಸಿದ್ದತೆ ಮಾಡಿಕೊಂಡಿದ್ದರು ಆದರೆ ಕೊನೆಗೆ ಬೌದ್ಧ ಧರ್ಮ ಸೇರಿದರು, ಹಾಗೇನಾದರು ಅವರು ಇಸ್ಲಾಂಗೆ ಮತಾಂತರ ಆಗಿದ್ದರೆ ಇಂದು ಸಮಸ್ತ ದಲಿತ ಸಮಾಜ ಬಾಂಧವರು  ಮುಸಲ್ಮಾನರಾಗಿರುತ್ತಿದ್ದರು, ಡಾ. ಜಿ ಪರಮೇಶ್ವರ್ ಹೋಗಿ ಫೀರ್ ಸಾಹೇಬ್ ಆಗ್ತಿದ್ರು, ಹನುಮಂತಯ್ಯ ಹೋಗಿ ಹಸನ್ ಸಾಬ್ ಆಗ್ತಿದ್ರು, ಮುಸ್ಲಿಂ-ದಲಿತರ ಸಂಬಂಧ ಅವಿನಾಭಾವದ್ದು ಅದಕ್ಕಾಗಿಯೇ ದಲಿತ ಕೆರಿಗಳಿದ್ದಲ್ಲೆಲ್ಲಾ ದರ್ಗಾಗಳಿವೆ ಎಂದು ಅವರು ಹೇಳಿದರು.

ರಾಜಕೀಯ ಲಾಭಕ್ಕಾಗಿ ಈ ದಲಿತ-ಮುಸ್ಲಿಂ ಜೋಡಣೆಯ ಹುನ್ನಾರ ಇಂದು ನಿನ್ನೆಯದಲ್ಲ. ಸ್ವಾತಂತ್ರ ಪೂರ್ವದಿಂದಲೂ ನಡೆದು ಬಂದಿರುವಂತದ್ದು. ಹಾಗಾದ್ರೆ ಅಂಬೇಡ್ಕರರ ಕುರಿತಾದ ಈ ಹೊಸ ಹೇಳಿಕೆಯಲ್ಲಿ ಎಷ್ಟು ಸತ್ಯತೆ ಅಡಗಿದೆ ಅಂತ ಇತಿಹಾಸದ ಪುಟಗಳನ್ನ ತಿರುವಿದಾಗ ಕಾಣುವುದು ಬೇರೆಯದೇ ಚಿತ್ರಣ. ಹೈದರಾಬಾದ್ ನಿಜಾಮ ಇಸ್ಲಾಂಗೆ ಮತಾಂತರವಾಗುವಂತೆ ಆಹ್ವಾನ ಕೊಟ್ಟು ಐದು ಕೋಟಿ ರೂಪಾಯಿಗಳ ಆಮಿಷ ಒಡ್ಡಿದಾಗ ಅಂಬೇಡ್ಕರರು ಅದನ್ನ ಸಾರಾಸಗಟಾಗಿ ತಿರಸ್ಕರಿಸಿದ್ದರು. ಕ್ರೈಸ್ತ ಮಿಷಿನರಿಗಳ ತಂತ್ರಕ್ಕೂ ಮಣಿದಿರಲಿಲ್ಲ. ಭಾರತೀಯ ಮೂಲ ಸಂಸ್ಕೃತಿಯ ಒಂದು ಭಾಗವೇ ಆಗಿರುವ ಬೌದ್ಧ ಧರ್ಮ ಸ್ವೀಕರಿಸಿದ್ದರು. ಯಾವುದೇ ವಿದೇಶಿ ಧರ್ಮಕ್ಕೆ ಹೋದರೂ ಅದು ಭಾರತೀಯ ಸಂಸ್ಕೃತಿಯ ವಿರುದ್ದವಾದದ್ದು ಎಂದು ಬಲವಾಗಿ ನಂಬಿದ್ದವರು. ಅಂತವರು ಇಸ್ಲಾಂಗೆ ಮತಾಂತರವಾಗಲು ಸಿದ್ದತೆ ಮಾಡಿಕೊಂಡಿದ್ದರು ಅನ್ನುವ ಹೇಳಿಕೆಯಲ್ಲಿ ಹುರುಳೇ ಇಲ್ಲ ಅನ್ನುವುದನ್ನ ಅವರ ಬರಹಗಳಿಂದಲೇ ತಿಳಿದುಕೊಳ್ಳುವ ಹೇರಳ ಅವಕಾಶ ಇರುವುದು ನಮ್ಮ ಅದೃಷ್ಟವೆ ಸರಿ, ಇಲ್ಲದಿದ್ದರೆ ರಾಜಕಾರಣಿಗಳು ಹಾರಿಸಿಬಿಡುವ ಸುಳ್ಳುಗಳೇ ಸತ್ಯವೆಂದು ನಂಬುವ ಒಂದು ದೊಡ್ಡ ಅಮಾಯಕ ವರ್ಗವೇ ಇದೆ.

ಬಾಬಾ ಸಾಹೇಬ್ ಅಂಬೇಡ್ಕರರು ಇಸ್ಲಾಂ ಕುರಿತಾದ ತಮ್ಮ ಖಚಿತವಾದ ನಿಲುವನ್ನು ಅವರ ಕೃತಿ “ಪಾಕಿಸ್ತಾನ ಆರ್ ಪಾರ್ಟೀಷನ್ ಆಫ್ ಇಂಡಿಯ”ದಲ್ಲಿ ಸ್ಪಷ್ಟವಾಗಿ ಉದಾಹರಣೆಗಳೊಂದಿಗೆ ದಾಖಲಿಸಿದ್ದಾರೆ. ಅದರ ಕೆಲವು ಮುಖ್ಯಾಂಶಗಳನ್ನ ಅವಲೋಕಿಸಿದಾಗ ಸ್ಪಷ್ಟವಾಗುವ ಒಂದು ವಿಷಯವೆಂದರೆ ಅಜ್ಜಂಪೀರ್ ಖಾದ್ರಿಯವರು ಕೇವಲ ದಲಿತ ಬಾಂಧವರ ಓಟಿಗಾಗಿ ಮಾಡಿದ ತಂತ್ರವೇ ಹೊರತು ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲವೆಂದು.

-       ಮುಸಲ್ಮಾನರು ಭಾರತಕ್ಕೆ ನಿಷ್ಟೆಯುಳ್ಳವರಾಗಿರಲು ಸಾಧ್ಯವಿಲ್ಲ. 1919 ರಲ್ಲಿ ಭಾರತೀಯ ಮುಸಲ್ಮಾನರು ಮಾಡಿದ ಖಿಲಾಫತ್ ಚಳುವಳಿಯ ಸಮಯದಲ್ಲಿ ಅಫ್ಘಾನಿಸ್ತಾನದ ಅಮೀರ್ ನಿಗೆ ಭಾರತದ ಮೇಲೆ ದಾಳಿ ಮಾಡಲು ಆಹ್ವಾನ ಕೊಟ್ಟಿದ್ದರು. (ಪುಟ 98)

-       ಇಸ್ಲಾಂ ಧರ್ಮದ ತತ್ವ: ಮುಸ್ಲಿಂ ಆಳ್ವಿಕೆಗೆ ಒಳಪಡದ ದೇಶದಲ್ಲಿ ಮುಸ್ಲಿಂ ಕಾನೂನು ಮತ್ತು ದೇಶದ ಕಾನೂನಿನ ನಡುವೆ ಸಂಘರ್ಷವಿದ್ದಲ್ಲಿ, ಮುಸಲ್ಮಾನರು ದೇಶದ ಕಾನೂನು ದಿಕ್ಕರಿಸಿ ಇಸ್ಲಾಂ ಕಾನೂನನ್ನ ಒಪ್ಪುವುದು ನ್ಯಾಯಸಮ್ಮತ (ಪುಟ 292)

-       ಮುಸಲ್ಮಾನರ ಕಾನೂನಿನಂತೆ ಪ್ರಪಂಚವು ಎರಡು ಭಾಗವಾಗಿದೆ. ಅದು ದಾರುಲ್ ಇಸ್ಲಾಂ (ಇಸ್ಲಾಂನ ಪವಿತ್ರ ಭೂಮಿ) ಮತ್ತು ದಾರುಲ್ ಹರಬ್(ಯುದ್ದ ಭೂಮಿ). ಮುಸಲ್ಮಾನರ ಆಡಳಿತ ಇರುವ ದೇಶವು ದಾರುಲ್ ಇಸ್ಲಾಂ ಅಂತ ಕರೆಯಲ್ಪಡುತ್ತದೆ. ಮುಸಲ್ಮಾನರು ಕೇವಲ ವಾಸಿಸುತ್ತಿದ್ದು ಅಲ್ಲಿ ಅವರ ಆಡಳಿತವಿಲ್ಲದಿದ್ದರೆ ಅದು ದಾರುಲ್ ಹರಬ್ ಎಂದು ಕರೆಯಲ್ಪಡುತ್ತದೆ. ಹೀಗೆ ಒಂದು ದೇಶವು ಇಸ್ಲಾಂ ದೇಶವಾಗಬಹುದು ಅಥವಾ ಯುದ್ದಭೂಮಿ ಆಗಬಹುದು. ಹಿಂದೂ-ಮುಸ್ಲಿಮರು ಸಮನಾಗಿ ಜೀವಿಸುವ ಭಾರತವು ಮುಸಲ್ಮಾನರಿಗೆ ಎಂದೂ ತಾಯ್ನೆಲವಾಗದು, ಅದು ಕೇವಲ ಯುದ್ದ ಭೂಮಿ ಅಷ್ಟೇ. (ಪುಟ 294)

-       ಭಾರತವು ಒಂದು ವೇಳೆ ಮುಸ್ಲಿಮರ ಆಳ್ವಿಕೆಗೆ ಒಳಪಡದಿದ್ದರೆ, ಅದು ದಾರುಲ್ ಹರಬ್ ಆಗಿರುತ್ತದೆ ಮತ್ತು ಇಸ್ಲಾಂನ ಪ್ರಕಾರ ಮುಸಲ್ಮಾನರು ಭಾರತದ ಮೇಲೆ ಜಿಹಾದ್ ಮಾಡಲು ಅವಕಾಶ ನೀಡುತ್ತದಲ್ಲದೆ, ಈ ಕಾರ್ಯ ಯಶಸ್ವಿ ಆಗಲು ಯಾವುದೇ ವಿದೇಶಿ ಮುಸ್ಲಿಮರ ಸಹಾಯ ತೆಗೆದುಕೊಳ್ಳಬಹುದಾಗಿದೆ ಅಥವಾ ಯಾವುದೇ ವಿದೇಶಿ ಮುಸ್ಲಿಂ ಶಕ್ತಿಯು ಭಾರತದ ಮೇಲೆ ಜಿಹಾದ್ ಘೋಷಿಸಿದರೆ ಅದಕ್ಕೆ ಮುಸಲ್ಮಾನರು ಸಹಾಯ ಮಾಡಬೇಕು. (ಪುಟ 296)

 

-       ಮತ್ತೊಂದು ಮುಖ್ಯ ಅಂಶವೆಂದರೆ, ಗಡಿ ಗುರುತಿಸುವ ಮತ್ತು ಅದಕ್ಕೆ ಒಳಪಡುವುದನ್ನ ಇಸ್ಲಾಂ ಒಪ್ಪುವುದಿಲ್ಲ ಮತ್ತು ಇದುವೆ ಅಖಂಡ ಇಸ್ಲಾಂ (ಪ್ಯಾನ್ ಇಸ್ಲಾಮಿಸ್ಮ್) ತತ್ವಕ್ಕೆ ಮೂಲಾದಾರ. ಇದುವೇ ಭಾರತದ ಮುಸಲ್ಮಾನರು ಮೊದಲು ಮುಸಲ್ಮಾನರು ಮತ್ತು ನಂತರದಲ್ಲಿ ಭಾರತೀಯ ಎಂದು ಹೇಳುವುದಕ್ಕೆ ದಾರಿ ಮಾಡಿ ಕೊಡುವ ತತ್ವ. ಇದು ಭಾರತೀಯ ಮುಸಲ್ಮಾನರು ಯಾಕೆ ಭಾರತದ ಏಳಿಗೆಗೆ ಯಾಕೆ ಕಡಿಮೆ ದುಡಿದಿದ್ದಾರೆ ಮತ್ತು ಮುಸ್ಲಿಂ ದೇಶಗಳಿಗಾಗಿಯೇ ಅವರನ್ನ ತೊಡಗಿಸಿಕೊಳ್ಳುತ್ತಾರೆ ಮತ್ತು ಅವರ ಯೋಚನೆಯಲ್ಲಿ ಮುಸ್ಲಿಂ ದೇಶಗಳು ಮೊದಲು ನಂತರ ಭಾರತ ಬರುತ್ತದೆ ಎಂಬುದನ್ನು ವಿವರಿಸುತ್ತದೆ. (ಪುಟ 297)

 

-       ಕೋಮು ಸೌಹಾರ್ದತೆ ಅಸಾಧ್ಯ: ಮುಸಲ್ಮಾನರು ದೇಶದ ಎಲ್ಲೆಡೆ ಹರಡಿರುವುದರಿಂದ ವಿಭಜನೆಯ ನಂತರವೂ ಭಾರತದಲ್ಲಿ ಉಳಿಯುವುದರಿಂದ ಏಕರೂಪದ ದೇಶವಾಗಲು ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಭಾರತ ಏಕರೂಪತೆ ತರಲು ಜನಸಂಖ್ಯೆಯ ವಿನಿಮಯದಿಂದ ಮಾತ್ರ ಸಾಧ್ಯ. ಜನಸಂಖ್ಯೆ ವಿನಿಮಯ ಆಗುವವರೆಗೂ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ ಸಮಸ್ಯೆ ಮುಂದುವರೆದು ಭಾರತದ ಸಮಾಜದಲ್ಲಿ ಅಶಾಂತಿ ಉಂಟುಮಾಡಲಿದೆ. (ಪುಟ 117)

 

-       ಹಿಂದೂ ಆಡಳಿತ ಒಪ್ಪಲಾರರು: ಹಿಂದೂಗಳನ್ನೊಳಗೊಂಡ ಸರಕಾರದ ಆಡಳಿತದಲ್ಲಿ ಮುಸಲ್ಮಾನರು ಎಷ್ಟರ ಮಟ್ಟಿಗೆ ಹೊಂದಿಕೊಳ್ಳುವರು ಅನ್ನುವ ಪ್ರಶ್ನೆ ಎದ್ದರೆ, ಅದಕ್ಕೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇಲ್ಲ, ಮುಸ್ಲಿಮರಿಗೆ ಹಿಂದೂಗಳೆಂದರೆ ಕಾಫಿರರು. ಕಾಫಿರರು ಗೌರವಕ್ಕೆ ಅನರ್ಹರು. ಅವರು ಕೀಳು, ಅದಕ್ಕಾಗಿ ಅವರಿಂದ ನಡೆಸಲ್ಪಡುವ ದೇಶವು ದಾರುಲ್ ಹರಬ್, ಹಿಂದೂಗಳ ಆಡಳಿತವನ್ನು ಮುಸ್ಲಿಮರು ಒಪ್ಪುವುದಿಲ್ಲವೆನ್ನಲು ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾಗಿಲ್ಲ. (ಪುಟ 301)

ಹಿಂದೂ-ಮುಸ್ಲಿಂ ಸಾಮರಸ್ಯದ ಬಗ್ಗೆ ಅಂಬೇಡ್ಕರರನ್ನ ಉಲ್ಲೇಖಿಸುವ ಸಯ್ಯದ್ ಅಜ್ಜಂಪೀರ್ ಖಾದ್ರಿಯವರು ಈ ವಿಷಯದಲ್ಲಿ ಬಹುಮುಖ್ಯವಾದ ಅವರ ಪಾಕಿಸ್ತಾನ ಆರ್ ಪಾರ್ಟೀಷನ್ ಆಫ್ ಇಂಡಿಯ ವನ್ನು ಯಾಕೆ ಓದಿಕೊಂಡಿಲ್ಲವೆನ್ನುವುದು ಆಶ್ಚರ್ಯಕರವಾದ ವಿಷಯ.

ಅಂಬೇಡ್ಕರರು ಭಾರತಿಯರಿಗೆ ಎಂದೆಂದಿಗೂ ಆದರ್ಶಪ್ರಾಯರು, ಅವರ ಅಧ್ಯಯನ ಮತ್ತು ಅನುಭವದಿಂದ ಹತ್ತಾರು ಸಲಹೆಗಳನ್ನ ಕೊಟ್ಟಿದ್ದಾರೆ. ದೇಶ ವಿಭಜನೆಯ ನಂತರ ಪಾಕಿಸ್ತಾನದಲ್ಲಿ ಸಿಲುಕಿದ ದಲಿತರನ್ನ ಕುರಿತು ನವೆಂಬರ್  1947 ರಲ್ಲಿ ಅಂಬೇಡ್ಕರರು ಪತ್ರಿಕಾ ಹೇಳಿಕೆ ಕೊಟ್ಟು ಅಲ್ಲಿ ಸಿಲುಕಿರುವ ದಲಿತರು ಯಾವ ಮಾರ್ಗ ಸಿಗುತ್ತದೋ ಅದನ್ನ ಹಿಡಿದು ತಕ್ಷಣ ಭಾರತಕ್ಕೆ ಬನ್ನಿ,  ಪಾಕಿಸ್ತಾನ ಮತ್ತು ಹೈದರಾಬಾದಿನ ಮುಸಲ್ಮಾನರು ನಂಬಿಕೆಗೆ ಅರ್ಹರಲ್ಲ ಅವರನ್ನ ನಂಬಬೇಡಿ ಅವರು ನಿಮ್ಮಿಂದ ಸಹಾಯ ಪಡೆಯುತ್ತಾರೆ ಆದರೆ ನೀವು ಅವರ ದೃಷ್ಟಿಯಲ್ಲಿ ಕನಿಷ್ಠ ಮತ್ತು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಿ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ಇಸ್ಲಾಂಗೆ ಮತಾಂತರವಾಗಬೇಡಿ ಎಂದು ಕಳಕಳಿಯ ಕರೆ ಕೊಡುತ್ತಾರೆ.

ಹೀಗೆ, ಇಸ್ಲಾಂ ಸೌಹಾರ್ದತೆಗೆ ಪ್ರತಿಕೂಲ ವಾತಾವರಣ ನಿರ್ಮಿಸುತ್ತದೆ ಆ ಮತಕ್ಕೆ ಮತಾಂತರವಾಗಬೇಡಿ ಎಂದು ಕರೆಕೊಟ್ಟಿದ್ದ ಅಂಬೇಡ್ಕರರು ತಾವೇ ಹೇಗೆ ಅದೇ ಮತಕ್ಕೆ ಸೇರಲು ಮುಂದಾಗಿದ್ದರು ಎಂದು ಮಾನ್ಯ ಸಯ್ಯದ್ ಅಜ್ಜಂಪೀರ್ ಖಾದ್ರಿಯವರೆ ಸ್ಪಷ್ಟಪಡಿಸಬೇಕು...!!

ಕಿರಣ್. ಬಿ




Monday, October 21, 2024

ವಚನ ಸಾಹಿತ್ಯದಲ್ಲಿ ಗೋವುಗಳ ಮಹತ್ವ...



ಹೊಸ ದಿಗಂತ

22,ಅಕ್ಟೋಬರ್ 2024.

ವಚನ  ಸಾಹಿತ್ಯದಲ್ಲಿ ಗೋವುಗಳ ಮಹತ್ವ...

ಭಾರತದಲ್ಲಿ ಗೋವನ್ನ ನಮ್ಮ ರಾಷ್ಟ್ರ ಪ್ರಾಣಿ ಎಂದು ಘೋಷಿಸಲು ಮತ್ತು ಅದರ ವಧೆಯನ್ನ ನಿಷೇದಿಸುವಂತೆ ಮಾಡಿದ ನೂರಾರು ಹೋರಾಟಗಳು ಇನ್ನೂ ಸಂಪೂರ್ಣ ಫಲ ಕೊಡುವಲ್ಲಿ ವಿಫಲವಾಗಿವೆ. ಭಾರತದ ಸಂವಿಧಾನದ ವಿಧಿ 48 ರಲ್ಲಿ ಹೇಳುವಂತೆ ರಾಜ್ಯ ಸರಕಾರಗಳು ಹಸುವಿನ ತಳಿ ಸಂರಕ್ಷಣೆ ಮತ್ತು ಸುಧಾರಣೆಗೆ ಒತ್ತು ಕೊಡಬೇಕು ಹಾಗೂ ಹಸು ಕರುಗಳ ಹತ್ಯೆಯನ್ನ ನಿಷೇದಿಸುವತ್ತ ಪ್ರಯತ್ನ ಪಡಬೇಕು. ಆದರೆ ಇದು ಕೇವಲ ನಿರ್ದೇಶನಾತ್ಮಕವಾಗಿರುವುದರಿಂದ  ಧಾರ್ಮಿಕ ಪ್ರಜ್ಞೆಯಿಲ್ಲದ ರಾಜ್ಯ ಸರಕಾರಗಳು ಇದನ್ನ ಬಹುಸಂಖ್ಯಾತ ಪ್ರಜೆಗಳ ಧಾರ್ಮಿಕ ಭಾವನೆಗಳಿಗೆ ಅನುಗುಣವಾಗಿಯೇ ಕಾನೂನು ರಚಿಸುವುದು ಕಷ್ಟ. ಶರಣರ ನಾಡು ಕರ್ನಾಟಕದಲ್ಲಿ ಸಂಪೂರ್ಣ ಗೋಹತ್ಯೆ ನಿಷೇದವಷ್ಟೆ ಅಲ್ಲದೆ ದೇಸೀ ಹಸುಗಳ ತಳಿ ಸಂರಕ್ಷಣೆಗೂ ರಾಜ್ಯ  ಸರಕಾರ ಗಮನಹರಿಸುವಂತಾಗಬೇಕು.

ಬಸವಾದಿ ಶರಣರು ಗೋವುಗಳಿಗೆ ಇನ್ನಿಲ್ಲದ ಮಹತ್ವವನ್ನ ಕೊಟ್ಟಿದ್ದು, ಹತ್ತಾರು ವಚನಗಳಲ್ಲಿ ಗೋವುಗಳ ಬಗ್ಗೆ ಉಲ್ಲೇಖವಿದೆ. ಬಿಜ್ಜಳನ ಆಸ್ಥಾನದಲ್ಲಿ ಲೆಕ್ಕ ಪತ್ರಗಳನ್ನ ನೋಡಿಕೊಳ್ಳುತ್ತ ಗುಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಶರಣ ಗುಪ್ತ ಮಂಚಣ್ಣನವರು ಕೆಳಗಿನ ವಚನದಲ್ಲಿ ಇಡೀ ಜಗತ್ತು ಗೋವಿನ ಹಂಗಿನಲ್ಲಿದೆ ಅನ್ನುತ್ತಾರೆ,

ಜಗವೆಲ್ಲವೂ ಗೋವಿನ ಹಂಗು,

ನರ ಸುರಾದಿಗಳೆಲ್ಲರೂ ಗೋವಿನ ಹಂಗು,

ಸಕಲ ಜೀವನ ಆಧಾರ ಗೋಮರ,

ಗೋ ಪ್ರಾಣಸ್ವರೂಪ ಗೋವಿಂದನೊಡೆಯ ನಾರಾಯಣಪ್ರಿಯ ರಾಮನಾಥಾ.

 

ವಚನಕಾರ ಶರಣರು ಕಪಿಲವರ್ಣದ ನಂದಿನಿ, ಕೃಷ್ಣವರ್ಣದ ಭದ್ರೆ, ರಕ್ತವರ್ಣದ ಸುರಭಿ, ಶ್ವೇತವರ್ಣದ ಸುಶೀಲೆ ಮತ್ತು ಚಿತ್ರವರ್ಣದ ಸುಮನೆ ಎಂಬ ಪಂಚವರ್ಣದ ಗೋವುಗಳಿಗೆ ತುಂಬಾ ಮಹತ್ವಕೊಟ್ಟಿದ್ದಾರೆ. ವಿಭೂತಿ, ಪಂಚಗವ್ಯ ಹಾಗೂ ಪಂಚಾಮೃತಕ್ಕೆ ಈ ಪಂಚವರ್ಣದ ಗೋವಿನ ಗೋಮಯ, ಗೋಮೂತ್ರ ಹಾಗೂ ಹಾಲನ್ನೇ ಬಳಸಲು ಸೂಚಿಸುವಂತ ಹಲವು ವಚನಗಳಿವೆ.

 

ಇನ್ನು ಶರಣ ಷಣ್ಮುಖಸ್ವಾಮಿಯವರ ಕೆಳಗಿನ ಸುಧೀರ್ಘವಾದ ಈ ಒಂದು ವಚನವು ಜಾಬಾಲೋಪನಿಷತ್ತಿನಲ್ಲಿರುವ ಪಂಚವರ್ಣದ ಗೋವುಗಳ ಹುಟ್ಟು ಮತ್ತು ಮಹತ್ವದ ಬಗ್ಗೆ ವಿವರಿಸುತ್ತದಲ್ಲದೆ ಯಾವ ಹಸುವಿನ ಗೋಮಯದಿಂದ ಯಾವ ರೀತಿಯ ವಿಭೂತಿಯಾಗುವುದೆಂದೂ ವಿವರಿಸುತ್ತದೆ.

ಸಚ್ಚಿದಾನಂದ ಪರಶಿವನ ಸದ್ಯೋಜಾತಮುಖದಿಂದ ಪೃಥ್ವಿತತ್ತ್ವ ಪುಟ್ಟಿತ್ತು.

ಆ ತತ್ವದಿಂದೆ ನಿವೃತ್ತಿ ಎಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಕಪಿಲವರ್ಣದ ನಂದಿನಿಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಮಹದೈಶ್ವರ್ಯವನ್ನುಂಟುಮಾಡುವಂಥ ಭೂತಿ ಎಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ವಾಮದೇವಮುಖದಿಂದೆ ಅಪ್ಪುತತ್ವ ಪುಟ್ಟಿತ್ತು.

ಆ ತತ್ವದಿಂದೆ ಪ್ರತಿಷ್ಠೆಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಕೃಷ್ಣವರ್ಣದ ಭದ್ರೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ದಿವ್ಯಪ್ರಕಾಶದಿಂ ಬೆಳಗುವಂಥ ಭಸಿತವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ಅಘೋರಮುಖದಿಂದೆ ಅಗ್ನಿತತ್ವ ಪುಟ್ಟಿತ್ತು.

ಆ ತತ್ವದಿಂದೆ ವಿದ್ಯೆಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ರಕ್ತವರ್ಣದ ಸುರಭಿಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಸಮಸ್ತ ಪಾತಕಂಗಳ ಭಕ್ಷಿಸುವಂಥ ಭಸ್ಮವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ತತ್ಪುರುಷಮುಖದಿಂದೆ ವಾಯುತತ್ವ ಪುಟ್ಟಿತ್ತು.

ಆ ತತ್ವದಿಂದೆ ಶಾಂತಿಯೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಶ್ವೇತವರ್ಣದ ಸುಶೀಲೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಸಕಲ ವ್ಯಾಧಿಗಳ ಕೆಡಿಸುವಂಥ ಕ್ಷಾರವೆಂಬ ವಿಭೂತಿ ಪುಟ್ಟಿತ್ತು.

ಮತ್ತಂ,

ಸಚ್ಚಿದಾನಂದ ಪರಶಿವನ ಈಶಾನ್ಯಮುಖದಿಂದೆ ಆಕಾಶತತ್ವ ಪುಟ್ಟಿತ್ತು.

ಆ ತತ್ವದಿಂದೆ ಶಾಂತ್ಯತೀತವೆಂಬ ಕಲೆ ಪುಟ್ಟಿತ್ತು.

ಆ ಕಲೆಯಿಂದೆ ಚಿತ್ರವರ್ಣದ ಸುಮನೆಯೆಂಬ ಗೋವು ಪುಟ್ಟಿತ್ತು.

ಗೋವಿನ ಗೋಮಯದಿಂದೆ ಭೂತ ಪ್ರೇತ ಪಿಶಾಚಿ ಬ್ರಹ್ಮರಾಕ್ಷಸ ಚೋರ ಸರ್ಪ ವ್ಯಾಘ್ರಾದಿಗಳ ಭಯವ ಕೆಡಿಸುವ ರಕ್ಷೆಯೆಂಬ ವಿಭೂತಿ ಪುಟ್ಟಿತ್ತು.

ಅದೆಂತೆಂದೊಡೆ: ಜಾಬಾಲೋಪನಿಷದಿ:

ಸದ್ಯೋಜಾತಾತ್ ಪೃಥಿವೀ ತಸ್ಯಾಃ ನಿವೃತ್ತಿಃ

ತಸ್ಯಾಃ ಗೋಮಯೇನ ವಿಭೂತಿರ್ಜಾತಾ ||

ವಾಮದೇವಾದುದಕಂ ತಸ್ಮಾತ್ ಪ್ರತಿಷ್ಠಾ

ತಸ್ಯಾಃ ಗೋಮಯೇನ ಭಸಿತಂ ಜಾತಂ ||

ಅಘೋರಾದ್ ವಹ್ನಿಃ ತಸ್ಮಾತ್ ವಿದ್ಯಾ

ತಸ್ಯಾಃ ರಕ್ತವರ್ಣಾ ಸುರಭೀ

ತಸ್ಯಾಃ ಗೋಮಯೇನ ಭಸ್ಮ ಜಾತಂ||

ತತ್ಪುರುಷಾದ್ ವಾಯುಃ ತಸ್ಮಾತ್ ಶಾಂತಿಃ

ತಸ್ಯಾಃ ಶ್ವೇತವರ್ಣಾ ಸುಶೀಲಾ

ತಸ್ಯಾಃ ಗೋಮಯೇನ ಕ್ಷಾರಂ ಜಾತಂ||

ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ

ತಸ್ಯಾಶ್ಚಿತ್ರವರ್ಣಾ ಸುಮನಾ

ತಸ್ಯಾಃ ಗೋಮಯೇನ ರಕ್ಷಾ ಜಾತಾ||''

ವಿಭೂತಿರ್ಭಸಿತಂ ಭಸ್ಮ | ಕ್ಷಾರಂ ರಕ್ಷೇತಿ ಭಸ್ಮನಃ|

ಭವಂತಿ ಪಂಚನಾಮಾನಿ| ಪಂಚಭಿರ್ನಾಮಭಿರ್ಭೃಶಮ್||''

ಐಶ್ವರ್ಯಕಾರಣಾದ್ಭೂತಿರ್ಭಾಸನಾದ್ಭಸಿತಂ ತಥಾ

ಸರ್ವಾಘಭಕ್ಷಣಾದ್ಭಸ್ಮ ಆಪದಾಂ ಕ್ಷಾರಣಾತ್ ಕ್ಷಾರಂ

ಭೂತ-ಪ್ರೇತ-ಪಿಶಾಚ ಬ್ರಹ್ಮರಾಕ್ಷಸಾಪಸ್ಮಾರ

ಭವಭೀತಿಭ್ಯೋsಭಿರಕ್ಷಣಾತ್ ರಕ್ಷೇತಿ''

ಎಂದುದಾಗಿ,

ಇಂತಪ್ಪ ಶ್ರೀ ವಿಭೂತಿಯ ನಿರಂತರ

ಸಾವಧಾನಭಕ್ತಿಯಿಂದ

ನಾನು ಸರ್ವಾಂಗದಲ್ಲಿ ಧರಸಿ ಶುದ್ಧನಿರ್ಮಲ

ಪರಮಪವಿತ್ರ ಕಾಯನಾದೆನಯ್ಯ ಅಖಂಡೇಶ್ವರಾ.

 

ಮೇಲಿನ ವಚನದಲ್ಲಿ ಜಾಬಾಲೋಪನಿಷತ್ತಿನ ಕನ್ನಡ ಅನುವಾದವಷ್ಟನ್ನೇ ಕೊಡದೆ ಸಂಸ್ಕೃತದ ಶ್ಲೋಕಗಳನ್ನೇ ಉಲ್ಲೇಖಿಸಲಾಗಿವೆ. ಶ್ರೀ ವಿಭೂತಿ ಉತ್ಪತ್ತಿಗಾಗಿ ಬೇಕಾದ ಗೋಮಯವನ್ನು ಪಂಚಗೋವುಗಳಿಂದಲೇ ಪಡೆಯಬೇಕೆಂದು ಹಲವು ಶರಣರು ಪ್ರತಿಪಾದಿಸಿದರೆ ಚನ್ನಬಸವಣ್ಣನವರು ಅದು ಯಾವ ಗೋವಿನ ಗೋಮಯವಾದರೇನು ವಿಭೂತಿ ಧರಿಸುವುದೇ ಮುಖ್ಯವೆಂದು ಹೇಳಿ ಅದರ ಮಹತ್ವವನ್ನು ಕೆಳಗಿನ ವಚನದಲ್ಲಿ ಚನ್ನಾಗಿ ವಿವರಿಸಿದ್ದಾರೆ.

 

ಅಯ್ಯಾ, ಶ್ರೀವಿಭೂತಿಯ ಸತ್ಕ್ರಿಯೆಯಿಂದ [ಮಾಡಿ]

ಧರಿಸುವ ಭೇದವೆಂತೆಂದಡೆ:

ಆವ ವರ್ಣದ ಗೋವಾದಡೆಯೂ ಸರಿಯೆ,

ಅವಯವಂಗಳು ನೂನು-ಕೂನಿಲ್ಲದೆ,

ಬರೆಗಳ ಹಾಕದೆ ಇರುವಂತಹ ಗೋವ ತಂದು,

ಅದಕ್ಕೆ ಧೂಳಪಾದೋದಕ ಸ್ನಾನವ ಮಾಡುವಂತಹದೆ ಕ್ರಿಯಾಲಿಂಗಧಾರಣದೀಕ್ಷೆ,

ಧೂಳಪಾದೋದಕಸೇವನೆಯೆ ಮಹಾತೀರ್ಥ.

ಭಕ್ತ ಆತನ ಭಾಂಡದಲ್ಲಿರುವ ಪದಾರ್ಥವ ಹಸ್ತ ಮುಟ್ಟಿ ಹಾಕಿದ ಮೇಲೆ ಮಹಾಪ್ರಸಾದವಾಯಿತ್ತು.

ಇಂತಹ ಆಚಾರಯುಕ್ತವಾದ ಗೋವಿನ ಸಗಣಿಯ

ಸ್ವಚ್ಛವಾದ ಸ್ಥಳದಲ್ಲಿ ಚೂರ್ಣ ಮಾಡಿ ಒಣಗಿಸಿ

ಕ್ರಿಯಾಗ್ನಿಯಿಂದ ದಹಿಸಿದ ಬೂದಿಯ ಧೂಳಪಾದೋದಕದಲ್ಲಿ ಶೋಧಿಸಿ,

ಅದರೊಳಗೆ ತಿಳಿಯ ತೆಗೆದು ಘಟ್ಟಿಯ ಮಾಡಿ

ಪೂರ್ವದಲ್ಲಿ [ಗುರು] ಹೇಳಿದ ವಚನೋಕ್ತಿಯಿಂದ ಧರಿಸಿದ ಲಿಂಗಾಧಾರಕಭಕ್ತಂಗೆ

ಗುರುದೀಕ್ಷೆಯುಂಟಾಗುವುದಯ್ಯಾ,

ಉಪಾಧಿಭಕ್ತಂಗೆ ಗುರುಲಿಂಗಜಂಗಮದ ಸದ್ಭಕ್ತಿ ದೊರೆವುದಯ್ಯಾ,

ನಿರುಪಾಧಿಭಕ್ತಂಗೆ ತ್ರಿವಿಧ ಪಾದೋದಕ ಪ್ರಸಾದ ದೊರೆಯುವುದಯ್ಯಾ,

ಸಹಜ ಭಕ್ತಂಗೆ ಸಚ್ಚಿದಾನಂದಪದ ದೊರೆಯುವುದಯ್ಯಾ,

ನಿರ್ವಂಚಕಭಕ್ತಂಗೆ ನಿರ್ವಾಣ ಪದವಾಗುವುದಯ್ಯಾ,

ನಿರ್ವಾಣಭಕ್ತಂಗೆ ನಿಷ್ಕಳಂಕ ಜ್ಯೋತಿರ್ಮಯ ಪರಶಿವಲಿಂಗದಲ್ಲಿ ಕೂಟಸ್ಥವಾಗಿ,

ನಿರಂಜನಜಂಗಮದಲ್ಲಿ ಕೂಡಿ ಹರಗಣಸಹವಾಗಿ

ನಿರವಯಸಮಾಧಿ ತಪ್ಪದು ನೋಡಾ ಕೂಡಲಚೆನ್ನಸಂಗಮದೇವಾ.

 

ಶ್ರೀ ವಿಭೂತಿ ಧಾರಣೆಯ ಮಹತ್ವವನ್ನು ಸೊಗಸಾಗಿ ತಿಳಿಸಿದ ಚನ್ನಬಸವಣ್ಣನವರು ಶಿವಯೋಗ ಜೀವನದ ಬಗ್ಗೆ ಬೋಧಿಸಿತ್ತಿದ್ದವರು. ಇಷ್ಟೆಲ್ಲ ಮಹತ್ವದ  ಗೋವು ಸಾಧು ಪ್ರಾಣಿ, ಪ್ರಮಾಣಿಕತೆಯ ಸಂಕೇತ ಎಂದು ಕೆಳಗಿನ ವಚನದಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ.

 

ಪಾತ್ರಾಪಾತ್ರಂಗಳ ವಿಶೇಷವೇನೆಂದರೆ,

ಗೋವು ಸರ್ಪಂಗಳ ಹಾಗೆ,

ಗೋವು ಎಂಥದೆಂದರೆ ಹುಲ್ಲಿನಿಂದ ಕ್ಷೀರವ ನೀಡುವುದು,

ಸರ್ಪವೆಂಥದೆಂದರೆ ಹಾಲು ಕುಡಿದಿ ವಿಷವ ಕಕ್ಕುವುದು,

ಪಾತ್ರ ಅಪಾತ್ರ ಈ ಪ್ರಕಾರವೆಂದು ತಿಳಿವುದಯ್ಯ ಶಾಂತವೀರೇಶ್ವರಾ

-       ಏಳಂದೂರು ಪರ್ವತ ಶಿವಯೋಗಿಯ ಏಕೋತ್ತರಶಸ್ಥಲ

ಮೇಲಿನ ವಚನದಲ್ಲಿ ಪಾತ್ರ ಅಪಾರ್ಥರು ಯಾರು ಎಂಬುದನ್ನ ತುಂಬಾ ಸೂಚ್ಯವಾಗಿ ಹೇಳಿದ್ದಾರೆ. ಶರಣರು ಶ್ರೀವಿಭೂತಿಯ ಮಹತ್ವ ತಿಳಿಸುತ್ತಾ, ಗೋವುಗಳ ಪೂಜನೀಯ ಸ್ಥಾನವನ್ನೂ ವಿವರಿಸಿದ್ದಾರೆ. ಜೊತೆಗೆ ಗೋವು ರೈತನ ಮಿತ್ರನಷ್ಟೆ ಅಲ್ಲ ಮಾನವರಿಗಿಂತ ಬುದ್ಧಿವಂತ ಪ್ರಾಣಿಯೆಂದು ಪಶುಪಾಲಕರಾಗಿದ್ದ ಶರಣ ಕೋಲ ಶಾಂತಯ್ಯನವರ ವಚನ ತುಂಬಾ ಸೊಗಸಾಗಿದೆ.

ಗೋವು ಮೊದಲು ಚತುಷ್ಟಾದಿ ಜೀವಂಗಳು

ತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯ ಬೀಡಿಂಗೆ ಹೋಹಂತೆ,

ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ.

ಬಂದುದ ಮರೆದ ಬಂಧ ಜೀವಿಗ ನಾನಾಗಿ ಜೀವಕಾಯದ ಸಂದ ಬಿಡಿಸು.

ಬಿಂದು ನಿಲುವ ಅಂದವ ಹೇಳು,

ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ

 

ಈ ರೀತಿ ಗೋವು ಮಾನವನಿಗೆ ಉಪಕಾರಿ ಹಾಗೂ ಪೂಜನೀಯವಾಗಿದೆ, ಅಂತ ಗೋವುಗಳನ್ನ ಕೊಲ್ಲಬಾರದೆಂಬುದು ಶರಣರ ಆಶಯವೇ ಆಗಿದೆ. ಗೋವುಗಳ ಕೊಲ್ಲುವವರ ಬಗ್ಗೆಯು ಉಲ್ಲೇಖವಿರುವ ಬಸವಣ್ಣನವರ ವಚನವಿದೆ. ಲಿಂಗದ ಪೂಜೆಯನ್ನ ಗೋವುಗಳ ಕೊಲುವ ಪಾಪಿಗಳ ದನಿಯು ಕೇಳುವ ಮುನ್ನವೇ ಮಾಡಬೇಕು ಎಂದು ಬಸವಣ್ಣನವರು ತಿಳಿಸಿದ್ದಾರೆ.

ಆದರೆ ಇತ್ತೀಚಿನ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಗಾರರು ಹಾಗೂ ಅದನ್ನ ಸಮರ್ಥನೆ ಮಾಡುವ ಸ್ವಾಮಿಜಿಗಳು ಈ ಎಲ್ಲ ವಚನಗಳನ್ನ ಅಧ್ಯಾಯಿಸಿದ್ದಾರೆಯೇ ಅನ್ನುವುದೇ ಅನುಮಾನಕರವಾಗಿದೆ. ಇತ್ತೀಚೆಗೆ ಸಾಣಿಹಳ್ಳಿ ಮಠದ ಸ್ವಾಮಿಗಳು ಗೋ ಹತ್ಯೆಯನ್ನೇ ಕಾಯಕ ಮಾಡಿಕೊಂಡಿರುವ ಮುಸ್ಲಿಮರ ಇಸ್ಲಾಂ ಮತವನ್ನ ಲಿಂಗಾಯತಕ್ಕೆ ಸಮನಾಗಿ ಕಾಣುವಂತೆ ಹೇಳಿಕೆ ಕೊಟ್ಟಾಗ ಗೋ ಆರಾಧಕ ಸನಾತನ ಪರಂಪರೆಯ ಲಿಂಗಾಯತರ ಭಾವನೆಗಳಿಗೆ ಧಕ್ಕೆ ಆಗುವುದೆಂದು ಯೋಚಿಸಲೆ ಇಲ್ಲ.

ಬಸವಣ್ಣನವರ ಅನುಯಾಯಿಗಳಾಗಿ 8 ಶತಮಾನಗಳೇ ಕಳೆದರೂ ಲಿಂಗಾಯತರು ಬಸವಾದಿ ಶರಣರ ತತ್ವಾದರ್ಶಗಳಿಗೆ ಬದ್ದರಾಗಿ ಇಂದಿಗೂ ಸಸ್ಯಾಹಾರಿಗಳಗಿದ್ದಾರೆ. ಆದರೆ ಇತ್ತೀಚೆಗೆ ಕೆಲವರು ಶರಣರು ಮಾಂಸಾಹಾರವನ್ನ ವಿರೋದಿಸಿಲ್ಲ ಅಂತೆಲ್ಲ ಹೇಳಿಕೆ ಕೊಟ್ಟು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀಳುವಂತೆ ಮಾಡಿದ್ದಾರೆ. ಶರಣರು ಈ ಬಗ್ಗೆ ಎನನ್ನ ಹೇಳಿದ್ದಾರೆಂದು ನೋಡಿದರೆ, ಮೊದಲಿಗೆ ಬಸವಣ್ಣನವರು  ಹೇಳಿದ್ದು “ದಯವಿಲ್ಲದ ಧರ್ಮವದೇವುದಯ್ಯ? ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ ದಯವೇ ದರ್ಮಧ ಮೂಲವಯ್ಯ” ಎಂಬುದಾಗಿ ಸಕಲ ಜೀವ ರಾಶಿಗಳಿಗೆ ಒಳಿತನ್ನೆ ಬಯಸಿ ಹಿಂಸೆಗೆ ಕಡಿವಾಣ ಹಾಕಿದ್ದಾರೆ. ಅಲ್ಲದೆ ಬಸವಣ್ಣನವರ ಇನ್ನೊಂದು ವಚನ ಹೀಗಿದೆ

ಅಂಗದಿಚ್ಚೆಗೆ ಮದ್ಯಮಾಂಸವ ತಿಂಬರು,

ಕಂಗಳಿಚ್ಚೆಗೆ ಪರವಧುವ ನೆರೆವರು.

ಲಿಂಗಲಾಂಛನಧಾರಿಯಾದಲ್ಲಿ ಫಲವೇನು?

ಲಿಂಗಪಥವ ತಪ್ಪಿ ನಡೆವವರು

ಜಂಗಮ ಮುಖದಿಂದ ನಿಂದೆ ಬಂದಡೆ

ಕೊಂಡಮಾರಿಂಗೆ ಹೋಹುದು ತಪ್ಪದು ಕೂಡಲಸಂಗಮದೇವ


ಇಲ್ಲಿ ಬಸವಣ್ಣನವರು ಮಾಂಸಾಹಾರಿಗಳು ಲಿಂಗಧಾರಣೆ ಮಾಡಿಕೊಂಡು ಲಿಂಗಪಥಕ್ಕೆ ಬಂದ ಮೇಲೆ ಮಾಂಸಹಾರವನ್ನ ತ್ಯಜಿಸಬೇಕು ಇಲ್ಲದಿದ್ದರೆ ಸಮಾಜದಲ್ಲಿ ಕೆಟ್ಟ ಹೆಸರು ಪಡೆದುಕೊಳ್ಳುವುದರಿಂದ ತಪ್ಪಿಸಿಕೊಳ್ಳಲಾರರು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಲಿಂಗವ ಕಟ್ಟಿದ್ದು ಸಾರ್ಥಕವಾಗಬೇಕೆಂದರೆ ಮಾಂಸಹಾರವನ್ನ ಸಂಪೂರ್ಣ ತ್ಯಜಿಸಲೇಬೇಕು ಎಂಬುದು. ಬಸವಣ್ಣನವರ ಈ ವಚನದ ಮೂಲ ಆಶಯ.

 

ಹೀಗೆ, ಲಿಂಗಾಯತರು ಸಂಪೂರ್ಣವಾಗಿ ಭಾರತೀಯ ಸನಾತನ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದಾರೆ, ಇಂತ ಲಿಂಗಾಯತ ಪರಂಪರೆಯನ್ನ ದುರುದ್ದೇಶದಿಂದ ಬೇರ್ಪಡಿಸಿ ಅದೊಂದು ಸ್ವತಂತ್ರ ಧರ್ಮ ಎಂದು ಹೇಳುತ್ತಾ ಅದನ್ನ ಇಸ್ಲಾಂ ಮತದೊಂದಿಗೆ ಸಮೀಕರಿಸುವುದು ಅಕ್ಷಮ್ಯ ಅಪರಾಧವಲ್ಲದೆ ಇನ್ನೇನು.

 

(ಈ ಲೇಖನದಲ್ಲಿ ಉಲ್ಲೇಖಿಸಿರುವ ವಚನಗಳು ಹಾಗೂ ವಚನಕಾರರ ಮಾಹಿತಿ: ಶ್ರೀ ತರಳಬಾಳು ಜಗದ್ಗುರು ಬ್ರಹನ್ಮಠ, ಸಿರಿಗೇರಿ)

 

ಕಿರಣ್.ಬಿ.


ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕೆಡಿಸುವ ಬೀಡುಗಳು...

15, ಮಾರ್ಚ್ 2025 ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸಾಮರಸ್ಯ ಕದಡುವ ಬೀಡುಗಳ ಅಥವಾ ಶ್ರೇಷ್ಟತೆಯ ವ್ಯಸನಿಗಳ ಮನೋ ವಿಕಾರ ಅನಾವರಣಗೊಳಿಸುವ ಸಾಧನಗಳ ಅನ್ನುವುದನ್ನ ವಿಮರ್ಶಿಸ...